ಕಾವ್ಯಯಾನ

 ಯಾವತ್ತೂ ಅವರ ಕತೆಯೇ

Buy Painting Poverty Artwork No 11012 by Indian Artist Bijendra Pratap

ಉಂಡೆಯಾ ಕೂಸೆ ಎಂದು
ಅವ್ವಗೆ ಕೇಳುವ ಆಸೆ
ಅಡ್ಡಿ ಮಾಡುವುದದಕೆ
ಅಪ್ಪನ ತೂತುಬಿದ್ದ ಕಿಸೆ

ಅವರ ಒಲೆಯ ಮೇಲಿನ ಮಡಕೆ
ಒಡೆದು ಹೋದುದು ಮುದ್ದೆ ಕೋಲಿನ
ಕಾರಣಕ್ಕೇನಲ್ಲ
ಎಸರಿಗೂ ನೀರ ಇಡಲಾರದ ಬರಡು
ನೋವಿಗೆ ಖಾಲಿ ಮಡಕೆಯೂ
ಬಾಯ್ದೆರೆಯಿತು ನೋಡಲ್ಲ.

ನೆಲೆ ನೀಡದ ಸೂರು, ಉರಿವ
ಸೂರ್ಯನ ತೇರು, ಕೆಂಡದುಂಡೆಯ
ಮೇಲೆಯೇ ನಡೆದರು ಅವರೆಲ್ಲ;
ಉರಿ ಹಾದಿ ಬರಿಗಾಲಿಗೆ ಊರ
ದಾರಿ ಮರೆಸಿತು, ಹರಿದ ಬೆವರು
ಕಣ್ತುಂಬಿ, ನೋಟ ಮಂಜಾಯಿತು

ಇವನಾರವ ಇವನಾರವ
ಎಂದವರೇ ಎಲ್ಲ ; ಇವ ನಮ್ಮವ
ಅವ ನಮ್ಮವ ಎನ್ನಲ್ಲಿಲ್ಲ. ಕಷ್ಟ
ಸಂಕಷ್ಟವಾಗಿ ಅವರನು ಕಾಡಿತಲ್ಲ
ಕಾಯಕಜೀವಿಗೆ ಯಾವ ಯುಗದಲೂ
ರಕ್ಷಣೆ ಸಿಗದಲ್ಲ..

*****

ವಸುಂದರಾ ಕದಲೂರು


Leave a Reply

Back To Top