ಸವಿತಾ ದೇಶಮುಖ ಅವರ ಕವಿತೆ-ಹೂವು- ಹಸಿವು…

ಎಲ್ಲ ಮನ ಸೂರೆಗೊಳ್ಳುವ
ಗುಲಾಬಿ- ಮಲ್ಲಿಗೆ- ಸಂಪಿಗೆ
ಉದಯದಿ ಹೊರಹೊಮ್ಮಿ
ಇರುಳಲಿ ಮುದಡಿ ಹೋಗುವ
ಒಂದು ದಿನದ ಸಂತೆಯಲ್ಲಿ..

ನಗುತಲಿವೆ ಮೋಹಗೊಳಿಸುವ
ವಯ್ಯಾರದಲಿ , ಪ್ರಸ್ಪುರಿಸುವ
ಭರದಲಿ, ಸುಗಂಧ ಸೂಸುವ
ತವಕದಲ್ಲಿ ,ಸೌಂದರ್ಯದ
ಅಂತರಂಗದ ತಂತ್ರವು…..

ಕುಸುಮಗಳು ಎನಿತು ಬಲ್ಲವು
ತನ್ನೊಡತಿಯ ಹೋರಾಟವು
ಹಸುವಿನ ಕಾದಾಟವು ,
ಉದರದ ಪರದಾಟ
ಜೀವದ ಸಮರದ ಆಟವು .,..

ಚುರುಗುಟ್ಟಿಸುವ ಹೊಟ್ಟೆಯು
ಕಿತ್ತು ತಿನ್ನುವ ಮಕ್ಕಳ ಕಾಟವು
ಹೇಳತೀರದ ಅಳಲಿನ ಕದನವು
ಹಸಿವಿನ ರಣದ ಸುಳಿದಾಟವು

ಕುಸುಮಗಳ ಅಂದ ಚೆಂದಕೆ
ಅರ್ಧ ಬೆಲೆಯ ತೆತ್ತಿ ಕೊಳ್ಳುವರು ,
ಹೂವಿನೊಡತಿಯ ನೋಡಿ
ಕನಿಕರಿಸದೆ- ಕಡೆಗಣಿಸುವರು….

ಉಕ್ಕಿ ಕಣ್ಣೀರಿನ ಕೊಡೆಯು
ಮರಿ ಮಾಚಿದ ವೇದನೆಯು
ಬಾಳುತಿಹಳು ಅವಳು
ಎನಿತು ಬಲ್ಲವಳು ಪುಷ್ಪಗಳ
ಸೌಂದರ್ಯದ ಗುಟ್ಟಿನು

ಹಸುವಿನ ಆಟದ ಕೂಟದಲಿ……


Leave a Reply

Back To Top