ಗಾಯತ್ರಿ ಎಸ್ ಕೆ ಅವರಕವಿತೆ-ಮನಸ್ಸು

ಮನಸ್ಸು ಕೇಳಿದೆ
ಮಾತನಾಡಿದೆ
ಮನದ ಚಿತ್ತವಿದು
ಮನಸ ಹೊದಿಕೆಯಿದು..

ಜೀವ ತುಂಬುವುದು
ಜೀವಧಾತುವಿನಂತೆ
ಕೆಲಸ ಎಲ್ಲದರ ವಿಚಾರ
ಅದರೊಳಗೆ..

ಬಯಸುತ್ತದೆ ಎಲ್ಲವನೂ
ಬೇಡಿಕೆ ಅಪಾರ ಸಲ್ಲಿಕೆ
ನಿದಾನ ಅವಸರವಿಲ್ಲದ
ಒಡಂಬಡಿಕೆ..

ಪ್ರಧಾನವಾದ ಯೋಚನೆ
ಹಲವು ಸಾಗುವುದು
ನಿತ್ಯವೂ ಸಂತಸ ವಿಷಯ
ಹಲವು ಗೆಲುವು..

ಮನದ ಬಾಗಿಲು ಇದು
ಬಯಸುವುದು ಹಾಗೆ
ತ್ಯಾಗ ಮನಸ್ಸು ತ್ಯಜಿಸುವುದು
ಬೇಕಾದ ಹಾಗೆ..

ಚಿತ್ತ ಬಿತ್ತನೆ ಚೆಲುವು ಚಿತ್ತಾರ
ಒಲವು ಝೇಂಕಾರ
ಮನಸ್ಸ ನಿರ್ಧಾರ
ಭಾವನಾ ಪ್ರಪಂಚವು..!!


Leave a Reply

Back To Top