ಎ.ಎನ್.ರಮೇಶ್ ಗುಬ್ಬಿ ಅವರ ಕವಿತೆ-ಏಕಾಂತ..!

ಜೀವನದ ಗೆಲುವು
ಸಂತಸಗಳ ಸಿಹಿಹಂಚಿ
ಸಂಭ್ರಮಿಸಬಹುದು..!

ಒಡಲ ಸೋಲುಗಳ
ಮನದ ನೋವುಗಳ
ಹಂಚುವುದಾದರು ಹೇಗೆ..?

ಕಾರಿರುಳ ಕೋಣೆಯಲಿ
ಕುಳಿತು ಒಂಟಿಯಾಗಿ
ಚೆಲ್ಲಿ ಬಿಡುವೆನು
ನಿಟ್ಟುಸಿರ ಬೆರೆಸಿ
ಕಂಬನಿ ಹನಿಗಳೊಂದಿಗೆ..!!


Leave a Reply

Back To Top