ಗಾಯತ್ರಿ ಎಸ್ ಕೆ ಅವರ ಕವಿತೆ-ಮನಸ್ಸಧಾರೆ

ಬದಲಿಸು ಒಳ್ಳೆಯದೇ
ಯೋಚಿಸು ಕಲ್ಪಿತ ಮನವಿದು
ಸಮಾಧಾನದಲ್ಲಿರು

ಸಮಯಕ್ಕೆ ಬೆಲೆ ಸರಿತನಕ್ಕೆ
ದಾರಿ ಸರಿಯಾದುದೇ ಹಾದಿ
ಯೋಚನೆ ಮಾಡು

ಬಿಡಬೇಡ ಎಲ್ಲ ಜವಾಬ್ದಾರಿ
ನಿಭಾಯಿಸು ಪ್ರಯತ್ನಕ್ಕೆ
ಶುಭದಾರಿ ಇಹುದು

ಮನಸ್ಸಧಾರೆಯಲ್ಲಿ ಮನವ
ಆವರಿಸು ನಿನ್ನಲ್ಲಿ ನಿನ್ನ
ಕಾಪಾಡು ಮನವೆ

ವಿಶಿಷ್ಟ ನೀನು ನಿನ್ನೊಳಗೆ
ನಾನು ಸ್ವಂತಿಕೆ ನಮ್ಮದು
ಬಲವಂತಿಕೆ ಬೇಕಿಲ್ಲ

ಕಠಿಣ ಪರಿಸ್ಥಿತಿಯಲ್ಲೂ ನಮ್ಮ
ನಾವು ನಡವಳಿಕೆಯಲ್ಲಿ
ಜೋಪಾನ ಅದೇ ಅಭಿಮಾನ


Leave a Reply

Back To Top