ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾಕೋ ಸಹಿಸಿಕೊಂಡ ನೋವು
ಮತ್ತೆ ಒಡಲ ಸುಡುತ ಏರಿದ ಕಾವು
ಹಿಂದಿನ ಪಥವನ್ನೇ ಅನುಸರಿಸಿದೆ
ಎಂದಿಗೂ ಅಂತ್ಯದ ಚುಕ್ಕಿ ಇಡದೆ

ನಗು ಮೊಗವು ಅರೆಕ್ಷಣ ಕೇವಲ
ಮರುಕ್ಷಣವೇ ಮನವು ವಿಲವಿಲ
ಹಳೆ ನೆನಪು ಮನದಿ ಆಕ್ರಮಿಸಿ
ಕಣ್ಣೀರ ಹನಿಗಳ ಜಾರಿಸಿ

ಎಲ್ಲೊ ಮನದ ಮೂಲೆಯಲಿ
ಭರವಸೆಯ ಬೆಳಕು ಇಣುಕುತಲಿ
ಬೆಳದಿಂಗಳಾಗಿ ಬದುಕ ಸೋಕಿದ ಕ್ಷಣ
ಫಲಿಸಲಿಲ್ಲ ಕನಸು ಅದೇ ದಿನ ಗ್ರಹಣ

ಮರದಿನ ಸ್ವಲ್ಪ ಸುಧಾರಿಸಿ ಮುಂದೆ
ನಡೆದು ದಾರಿಯ ಹುಡುಕಿ ಹೊರಟರೆ
ಸಾಗುವ ದಾರಿಯುದ್ದಕ್ಕೂ ತುಂಬಿದೆ
ನಕ್ಕು ಕರೆವ ಕನಸು ಆಸೆಗಳ ಚಹರೆ

ಅವುಗಳ ಪಡೆಯಲೆತ್ನಿಸಿ ಕೈ ಚಾಚಿದರೆ
ಕೈಗಳೇ ಬಲಹೀನಗೊಂಡಿವೆ
ಕಾಲುಗಳೆರಡು ಛಲದಿಂದ ಸಾಗಿದರೆ
ಎಡವಿ ಸೋಲೊಪ್ಪಿ ಸುಮ್ಮನೆ ಕೂತಿವೆ

ನಾಲ್ಕು ದಿನದ ಬಾಳಿನಲಿ ನಾ
ಕನಸು ,ನೆಮ್ಮದಿ ಬಯಸಿದ್ದು ತಪ್ಪಾ
ಕಷ್ಟ ಮೋವಿನ ಪರಿಹಾರಕ್ಕಾಗಿ ನಾ
ಕೈ ಮುಗಿದು ಬೇಡಿದ್ದೇ ತಪ್ಪಾ

ಎಲ್ಲ ಅನುಭವಿಸಿ ತಗ್ಗಿ ಬಗ್ಗಿ ನಡೆದು
ವಂಚಿಸದೆ ಮೌನದಿಂದ ಪಡೆದು
ಗಳಿಸಿದ ನಂಬಿಕೆ ಮುರಿಯಬೇಡ “ದೇವಾ”
ನನ್ನ ಬೇಡಿಕೆಲಿ ಲೋಪವಿದ್ದರೆ ಕ್ಷಮಿಸಿ ಬಿಡು


About The Author

Leave a Reply

You cannot copy content of this page

Scroll to Top