ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸ್ನೇಹ.

ಬಂದು ಹೋಗುವ ನಡುವೆ
ನಮ್ಮ ಸ್ನೇಹ ಗಟ್ಟಿಯಾಗಿರಲಿ
ಅಂತರಂಗದೊಳಗಿನ ಪ್ರೀತಿ
ವಿಶ್ವಾಸ ನಮ್ಮೊಳಗೆ ಸದಾಕಾಲ
ನೆಲೆಸಿರಲಿ
ನಮ್ಮ ನಡುವಿನ ದೂರ
ನಮ್ಮನ್ನು ದೂರವಾಗಿಸದಿರಲಿ
ನಮ್ಮ ನಡುವಿನ ಅಕ್ಷರದ ಕೊಂಡಿ ಕಳಚದಿರಲಿ
ಸ್ನೇಹದ ಸಂಪತ್ತಿಗೆ ಯಾವುದೇ
ಚ್ಯುತಿ ಬಾರದಿರಲಿ
ಸಮಯ ಸಿಕ್ಕಾಗ ಎರಡಕ್ಷರ
ನಮ್ಮ ನಡುವೆ ಹರಿದಾಡಲಿ
ಕ್ಷೇಮ ಸಾಮಾಚಾರದ ವಿನಿಮಯ
ನಿತ್ಯ ನಿರಂತರವಿರಲಿ
ಕಂಡು ಕಾಣದ ಅಂತರಂಗದ ಬಂಧ ಎಂದೆಂದೂ ಗಟ್ಟಿಯಾಗಿರಲಿ
ಕಣ್ಣಿಗೆ ಕಾಣದ ಸ್ನೇಹ
ಮನದಿ ತಣ್ಣಗಿರಲಿ
ಬಂಧನವಲ್ಲದ ಬಂಧ
ನಮ್ಮ ಬಂದಿಸಿಡಲಿ
ಒಳಿತಿನ ಭಾವನೆಗಳ
ಮಿಡಿತಗಳು ಜೊತೆಗಿರಲಿ

2 thoughts on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸ್ನೇಹ.

Leave a Reply

Back To Top