ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೆನೆ ಮನವೇ ಅಣ್ಣ ಬಸವಣ್ಣನ
ತಿಳಿ ಮಗುವೇ ನೀನವರ ವಚನವನ್ನ

ಕಾಯಕವೇ ಕೈಲಾಸವೆಂದರುಹಿದರು
ಜಾತಿ ಮತ ನೂಕಾಚೆಗೆ ಎಂದರವರು

ನಾರಿಯರ ಶರಣಿಯರೆಂದು ಗೌರವಿಸಿದರು
ಕೂಡಲಸಂಗಮನಾಥನ ಒಲಿಸಿಕೊಂಡವರು

ಅಡ್ಡಿಯಾಗದು ಭವಸಾಗರ ವೆಂದೂ
ದೈವ ಸಾಕ್ಷಾತ್ಕಾರ ತಾ ಪಡೆಯಲದು

ಅಣ್ಣನ ವಚನವದು ಬರಿಯ ಬರಹವಲ್ಲ
ಪಚನಗೊಳಿಸಿದರೆ ನಮ್ಮ ಬಾಳು ಸಿಹಿಬೆಲ್ಲ

ಯುಗಗಳೆಷ್ಟೆ ಉರುಳಿದರೂ ಯುಗಪುರುಷರಾದಿರಿ
ಜಗ ಬೆಳಗಲು ಬಂದ ಜ್ಞಾನ ಜ್ಯೋತಿ ನೀವಾದಿರಿ

ನೀಗಲು ಭುವಿಯ ಜ್ಞಾನಾಂಧಕಾರವನು
ಆ ದೈವ ಕಳಿಸಿದ ದೇವ ಪುರುಷನೇ ನೀನು

ಜ್ಙಾನದ ಜ್ಯೋತಿಯ ಜಗಕೆ ಬೆಳಗಿದಿರಿ
ನಾನು ನನದೆಂಬ ಸ್ವಾರ್ಥವಳಿದಿರಿ

ಅನುಭವ ಮಂಟಪದಿ ಸೇರಿಸಿದಿರಿ ಶರಣರನು
ಅನುಭಾವಿಗಳ ಅನುಭವವು ತಳೆದವು ವಚನದ ರೂಪವನು

ಸಮಾನತೆಯ ಬಿತ್ತಿದ ಭಕ್ತಿ ಭಂಡಾರಿ ಬೀಜ
ಕಾಯಕದಿ ಕೈಲಾಸ ಕಂಡ ಜಗ ಬೆಳಗಿದ ರವಿತೇಜ

ಕಾಯುತಿಹಳು ಧರಣಿ ದೇವ ಪುರುಷನಿಗೆ ಜನ್ಮ ನೀಡಲು
ಮತ್ತೊಮ್ಮೆ ಉದಯಿಸಿರಿ ಜ್ಞಾನಜ್ಯೋತಿಯ ಬೆಳಗಲು


About The Author

2 thoughts on “ಮಧುಮಾಲತಿರುದ್ರೇಶ್-ನೆನೆ ಮನವೆ ಬಸವನ”

  1. ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ತಮಗೆ ತುಂಬು ಧನ್ಯವಾದಗಳು

  2. ಕವನದ ಉದ್ದೇಶವೇನು..? ಅದು ಸಾರ್ಥಕವಾಗಿದೆಯೇ…?
    ////೦೦೦೦/////
    ಜಿ.ಎಸ್.ಪ್ರಕಾಶ್,ಬೆಂಗಳೂರು
    ೦೦೦

Leave a Reply

You cannot copy content of this page

Scroll to Top