ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ

ತೇಪೆ

ಬಿರಿದ ಗೋಡೆಗೂ
ಮುರಿದ ಮನಕೂ
ಚಿತ್ತಾರದ ರಂಗವಲ್ಲಿ ಹಾಕಿ
ಆದ ತಪ್ಪನು ತಿದ್ದುವ ನೆಪದಲಿ
ಅಲ್ಲಲ್ಲಿ ತೇಪೆ ಹಾಕುತ್ತಿದ್ದೇನೆ.

ಅಭಿವ್ಯಕ್ತಿಯ ಸ್ವಾತಂತ್ರ್ಯದಿ
ಕೊಸರಿ ಹೋದವರ ಸೇರಲು
ಕಳವಳಗೊಂಡವರ ಸುಳಿಯಲು
ಮೇರೆ ಮೀರಿದ ಕಂದಕವ ತುಂಬಲು
ಆತ್ಮಾವಲೋಕನದ ಮಹತ್ವಾಕಾಂಕ್ಷೆ ಫಲಕೆ.

ಒಮ್ಮೊಮ್ಮೆ ಮೌನದೊಡವೆಯಲಿ
ಚದುರಿದ ಅಂಗಳಕೆ ಚೆಲುವ ಭಿತ್ತರದಿ
ಧಾವಂತದ ಬದುಕಿಗೆ ಜೀವಂತವಾಗಿ
ಅನುಕ್ಷಣವ ಅನುಭವಿಸಲು಼
ಮುಕ್ಕಾಗುವದನು ತಪ್ಪಿಸಲು.

ಹರಿದ ಕಾಗದವ ಹೊಂದಿಸಲು
ಮಾನ ಮುಚ್ಚುವ ಉಡುಪಿಗೆ
ತುಂಡಾದ ನೋಟಿಗೂ
ಸೊರಗಿ ಕೊರಗುವನು ತಡೆಯಲು
ವಾದ ವಿವಾದವ ತಪ್ಪಿಸಲು ತೇಪೆ ಹಚ್ಚಬೇಕಿದೆ.

ರೇಷ್ಮಾ ಕಂದಕೂರ

About The Author

Leave a Reply

You cannot copy content of this page

Scroll to Top