ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಂಗಾಧರ ಅವಟೇರ

ನೀನೇಷ್ಟು ಅಮರ

ನೆಲದಲಿ ಹುಟ್ಟಿ ನೋಟದಲಿ ಸೆಳೆವ
ಎಲೆ ಮರೆಯಲಿ ಅವಿತು ನಾಚಿ ನಿಂತ ನೀರೆ
ನೀನಾರೆ.
ಬಾಡುವ ಚಾಡು ಅರಿತು ಬೀಗುಮಾನದಿ
ಅರಳಿ,ಮನಸೆಳೆವ ನಗು ಚೆಲ್ಲುವ ಚೆಲುವೆ
ನೀನಾರೆ
ಬಾಳು ಚಣವಾದರೂ ದಾರಿ ಹೋಕರ
ಕಣ್ಣೆಂಜಲಕೆ ತಾಗಿ ರವಿಯ ವಿರಹದುರಿಯಲಿ ಬೆಂದ ಸಖಿ, ನೀನಾರೆ
ಅರ್ಚಕರ ಒಲವಿಂದ ದೇವರ ಮೂಡಿ ಏರಿದಿ
ನಲ್ಲನ ಪ್ರೀತಿಯ ಸೇರೆ ಸಿಕ್ಕು ನಲ್ಲೆಯ ಕೇಶದಲಿ ಕುಳಿತ ನೀನಾರೆ
ಬದುಕು ಕ್ಷಣವಾದರೂ,ಇರುವಷ್ಟು ಕಾಲ
ನಗುವ ನಗುವ ಹೂವೆ ನೀನೇಷ್ಟು ಅಮರ !


ಗಂಗಾಧರ ಅವಟೇರ

.


About The Author

3 thoughts on “ಗಂಗಾಧರ ಅವಟೇರ ಕವಿತೆ-ನೀನೇಷ್ಟು ಅಮರ”

  1. ಕೆಲವೇ ಹೊತ್ತು ಹೂವಾಗಿ ಅರಳಿ ಎಲ್ಲರ ಮನಸನ್ನು ಗೆಲ್ಲುವ ಹೂವಿನಂತೆ ಮನುಜರು ತಮ್ಮ ಬದುಕಿನ ಅವಧಿಯಲ್ಲಿ ಇತರರ ಒಳಿತಿಗೆ ಮೀಸಲಿಟ್ಟರೆ ಜೀವನ ಸಾರ್ಥಕವೆಂಬ ಉದಾತ್ತ ಆಶಯವಿದೆ…ಅಭಿನಂದನೆಗಳು

Leave a Reply

You cannot copy content of this page

Scroll to Top