ಅಕ್ಕಮಹಾದೇವಿ ತೆಗ್ಗಿ ಕವಿತೆ-ಅಂತರಂಗದ ಮಾತು

ಕಾವ್ಯ ಸಂಗಾತಿ

ಅಕ್ಕಮಹಾದೇವಿ ತೆಗ್ಗಿ

ಅಂತರಂಗದ ಮಾತು

ಮನದ ಮಿಡಿತ ಕೇಳುವವರಾರು?

ಮಿಡಿತ, ತುಡಿತ ಎಲ್ಲವನು ಹಂಚಿಕೊಳ್ಳಲೇ ಬೇಕು ಈಗ

ಬಾನಲಿ ಚಂದ್ರನ ಶೀತಲ ಕಿರಣದಂತೆ ಕೋಗಿಲೆಯ ಗಾನದಂತೆ,

ಪ್ರೀತಿ ಪ್ರೇಮದ ನಿನ್ನ ಆ ಮನದಲ್ಲಿ ಕನಸುಗಳಿಲ್ಲವೇ?
ಆ ಸುಂದರ ಕನಸು ನನಗಾಗಿಸೋಣ

ಜಾತಕ ಪಕ್ಷಿಯಂತೆ ನಿನ್ನ ನಿರೀಕ್ಷೆಯಲ್ಲಿರುವೆ.

ಸೂರ್ಯ ಚಂದ್ರನಂತೆ ಚಿರವಾಗಲಿ ಇದುವೆ ಬಂಧ ಋಣಾನುಬಂಧ
ಜನುಮ ಜನುಮದ ಅನುಬಂಧ…..


ಅಕ್ಕಮಹಾದೇವಿ ತೆಗ್ಗಿ…..

Leave a Reply

Back To Top