ಕನ್ನಡ ರಾಜ್ಯೋತ್ಸವ ವಿಶೇಷ
ಡಾ ದಾನಮ್ಮ ಝಳಕಿ-
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ,
ಬೆಳಸ ಬನ್ನಿ ಕನ್ನಡ
ಮನ ಮನದಲಿ,
ಮನೆ ಮನೆಯಲಿ
ನಲಿದಾಡಲಿ ಕನ್ನಡ,
ಹೃದಯ ಭಾಷೆ ಕನ್ನಡ
ಬದುಕು ಕಟ್ಟಿದ ಕನ್ನಡ
ಹೃದಯ ಮುಟ್ಟಿದ ಕನ್ನಡ
ಭಾವ ಭಿತ್ತಿದ ಕನ್ನಡ
ಕಣ ಕಣದಲಿ ಸ್ಪೂರ್ತಿ ಬಿತ್ತಿ
ನವಚೇತನದ ಕನ್ನಡ
ಸಿರಿತನದ ಕನ್ನಡ
ಆಧುನಿಕತೆಯ ಭರಾಟೆಯಲಿ
ಇಂಗ್ಲೀಷದ ವ್ಯಾಮೋಹದಲಿ
ಕೃತ್ರಿಮತೆಯ ನೋಟದಲಿ
ಕಾನ್ವೆಂಟ ಶಾಲೆಯಲಿ
ಮುಚ್ಚದಿರಿ ಕನ್ನಡ ಶಾಲೆಯನು
ಮರೆಯದಿರಿ ಬದುಕು ಕಟ್ಟಿದ ಕನ್ನಡ
ನೆಲದ ಭಾಷೆ ಮಾತೃಭಾಷೆ
ಅಂತರಾಳದ ಭಾವವದು
ಬಸವಣ್ಣನ ನಾಡಲಿ
ಕಾಯಕ ದಾಸೋಹದ ಸುಧೆಯದು
ನಮ್ಮ ನೆಲೆ ನಮ್ಮ ಜಲ
ಸಂಸ್ಕೃತಿ ಬಿಂಬಿಸುವ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಡಾ ದಾನಮ್ಮ ಝಳಕಿ