ನಾಗರಾಜ ಜಿ. ಎನ್. ಬಾಡ ವಿಧಾಯದ ಕ್ಷಣಗಳಲಿ…

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ವಿಧಾಯದ ಕ್ಷಣಗಳಲಿ…

ಖುಷಿ ಖುಷಿಯಾಗಿ ಬದುಕನ್ನ
ಮುಗಿಸಿ ಬಿಡ ಬೇಕು
ಯಮನು ಬಂದಾಗ ನಗು
ನಗುತಾ ಎದ್ದು ನಿಲ್ಲ ಬೇಕು
ಸಾವಂತ ಸಾವು ನಮ್ಮ ಸಡಗರವ
ನೋಡಿ ನಾಚಿ ಕೊಳ್ಳಬೇಕು
ಇರುವಷ್ಟು ದಿನಗಳು
ಎಲ್ಲರೊಳಗೊಂದಾಗಿ ಬಾಳ ಬೇಕು
ಬೆಚ್ಚನೆಯ ಭಾವನೆಯ ಹಂಚ ಬೇಕು
ನೋವಿರಲಿ ನಲಿವಿರಲಿ
ಮುಂದೆ ಸಾಗುತಿರಬೇಕು
ಬಾಳಲ್ಲಿ ಸಿಹಿಯಾದ ಮಾತು
ತುಂಬಿ ಇರಬೇಕು
ಕಹಿಯಾದ ಭಾವನೆಯ
ಮರೆತು ಬಿಡ ಬೇಕು
ವಿಧಾಯದ ಕ್ಷಣಗಳಲಿ
ಸಂತೃಪ್ತಿಯ ಭಾವ ತುಂಬಿರಬೇಕು
ನಮ್ಮವರ ಕಣ್ಣಲ್ಲಿ ಅಗಳಿಕೆಯ
ನೋವು ಶಾಶ್ವತವಾಗಿ ತುಂಬಿರ ಬೇಕು


ನಾಗರಾಜ ಜಿ. ಎನ್. ಬಾಡ,

Leave a Reply

Back To Top