ರೇಷ್ಮಾ ಕಂದಕೂರ-ಪುಟಿದೇಳು

ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ-

ಪುಟಿದೇಳು

ಪುಟಿದೇಳು ದೂರುದಾರರ ನಡುವೆ
ನೋಯಿಸಿದವರ ಸಮಜಾಯಿಸದೆ
ಬೇಯದಿರು ಹಿಯಾಳಿಕೆಗೆ.

ಭರವಸೆ ಕಳೆದುಕೊಳ್ಳದಿರು
ನಿನ್ನಾಲಂಗಿಸಿದವರಿಗೆ ಒರಗು
ಭಿನ್ನಮತಕೆ ಸುಮ್ಮನಿದ್ದು ಬಿಡು.

ಖಿನ್ನತೆಯ ಹಂಗೇಕೆ
ಸನ್ನಡತೆಯ ಅರಸುವ
ಬೊಗಳುವ ಕುನ್ನಿಗಳ ಕಡೆಗಣಿಸಿ.

ಮುನ್ನಡೆದು ಬಾಡು ಬಾಗದೇ
ಹೊನ್ನುಡಿಗೆ ತೂಗಿ
ಬೆನ್ನು ಮಾಡಿ ನಡೆ ಮೂದಲಿಸುವವರಿಗೆ.

ಬಾನಾಡಿಯಾಗಿ ಹಾರು
ಸ್ವಚ್ಛ ದಿಗಂತದೆಡೆ
ಸಮುಚ್ಚಯದಿ ಒಂದಾಗಿ.

ಬಲವಾಗಿ ನಡೆ
ಗಲಿ ಬಿಲಿ ಏತಕೆ
ನಡುಗದೆ ಹುಸಿನುಡಿಗೆ.

ಅಡಿಗಡಿಗೆ ಬಿಡಾಡಿಗಳು
ತಡವರಿಸದೇ ಹಾದಿಯಲಿ
ಬಾಡಿ ಬೆಂಡಾಗದೇ ನಲಿದಾಡು.

ಕವಡೆಯಾಸೆಗೆ ಬಲಿಪಶು ಆಗದೇ
ಶ್ರಮಿಕತೆಯ ಕಡೆಗೆ
ಭ್ರಮಾ ಲೋಕ ಮರೆತು.


ರೇಷ್ಮಾ ಕಂದಕೂರ

Leave a Reply

Back To Top