ಡಾ ಸಾವಿತ್ರಿ ಕಮಲಾಪೂರ ಕವಿತೆ-‘ನಾರಿ _ಗೌರಿ’

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

‘ನಾರಿ _ಗೌರಿ’

ಅವಳೆದೆ ಕೊರೆದು
ಹೊರ ಬಂದ
ಗೋಲಿಗೆ ಗೌರಿ
ನಲುಗಿ ಬಿದ್ದಳು
ಹೌ ಹಾರಿ
ಮತೀಯ ಮತ ಧರ್ಮದ
ಸೋಗು ಹಾಕಿ ಕುಣಿವ
ಪೌರುಷದ ಕೀಚಕರ
ಅಟ್ಟಹಾಸವನು
ಕೆತ್ತಿದಳು ಲೇಖಕಿ
ಖಡ್ಗದ ಮೊನೆ ತಿವಿದ
ಬರಹಕೆ ಬಲಿಯಾದಳೇ? ಗೌರಿ
ವಿಧಿ ಬರಹ ಇರಬಹುದೇ ?
ಸುರಿದ ಗೋಲಿ ಮಳೆಗೆ
ಒಂಟಿ ಹೋರಾಟದಲ್ಲಿ
ದ್ವೇಷ ದಳ್ಳು ರಿಗೆ
ಬಲಿಯಾದಳೇ ?
ಅದಾವ ಕಾರಣ?
ವೀರ ಚೆನ್ನಮ್ಮ ಳ
ಕೆಚ್ಚೆದೆ ಗೌರಿಯನು
ಮೆಚ್ಚಲೆ ಬೇಕು!

ನಾರಿಯರು..


ಡಾ ಸಾವಿತ್ರಿ ಕಮಲಾಪೂರ

Leave a Reply

Back To Top