ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಯದೇವಿ ಆರ್ ಯದಲಾಪೂರೆ-

ನ್ಯಾಯ ಸಿಗಲಿಲ್ಲ

ಕೆಚ್ಚೆದೆಯ ನಾರಿ ಗೌರಿ
ಪಕ್ಷಪಾತ ಲಂಕೇಶ್
ಪತ್ರಿಕೋದ್ಯಮದ
ರೂವಾರಿ

ಲೇಖನ ಹಿಡಿದಳು
ಅಂಜದ ಗಂಡುಗಲಿ
ಸಂಘರ್ಷಕ್ಕೆ ಹೆಸರಾದ
ಎಂಟೆದೆಯ ಬಂಟಗಾರ್ತಿ

ಸತ್ಯವಂತರಿಗೆ
ರೂಪಿಸಲು ನಿರಂತರ
ದುಡಿದಳು
ನೆಲಕಚ್ಚಿ ಗಟ್ಟಿಯಾಗಿ

ಕೋಮುವಾದಿಗಳಿಗೆ
ದುಷ್ಟ ಭ್ರಷ್ಟರಿಗೆ
ಆದಳು ನಾರಿ
ಸಿಂಹಸ್ವಪ್ನ

ಸಹಿಸಲಿಕ್ಕಾಗಲಿಲ್ಲ
ಇವಳ ಬೆಳವಣಿಗೆ
ತಮ್ಮ ಗೋರಿ
ಕಟ್ಟುವಳೆಂದು ತಿಳಿದ
ಖದಿಮರು

ಸ಼ಂಚು ಹೂಡಿದರು
ಮೆಲ್ಲ ಮೆಲ್ಲನೆ
ಗುಂಡು ಹಾರಿಸಿ
ಜೀವ ಉರುಳಿಸಿದರು

ಸತ್ಯದ ನಾಶಮಾಡಿ
ಮೆರೆದರು ಕೋಮುವಾದಿಗಳು
ಇಂದಿಗೂ ನ್ಯಾಯ
ಸಿಗಲಿಲ್ಲ ಗೌರಿಗೆ

———————————————-

ಜಯದೇವಿ ಆರ್ ಯದಲಾಪೂರೆ

About The Author

Leave a Reply

You cannot copy content of this page

Scroll to Top