ಜಯದೇವಿ ಆರ್ ಯದಲಾಪೂರೆ-ನ್ಯಾಯ ಸಿಗಲಿಲ್ಲ

ಕಾವ್ಯ ಸಂಗಾತಿ

ಜಯದೇವಿ ಆರ್ ಯದಲಾಪೂರೆ-

ನ್ಯಾಯ ಸಿಗಲಿಲ್ಲ

ಕೆಚ್ಚೆದೆಯ ನಾರಿ ಗೌರಿ
ಪಕ್ಷಪಾತ ಲಂಕೇಶ್
ಪತ್ರಿಕೋದ್ಯಮದ
ರೂವಾರಿ

ಲೇಖನ ಹಿಡಿದಳು
ಅಂಜದ ಗಂಡುಗಲಿ
ಸಂಘರ್ಷಕ್ಕೆ ಹೆಸರಾದ
ಎಂಟೆದೆಯ ಬಂಟಗಾರ್ತಿ

ಸತ್ಯವಂತರಿಗೆ
ರೂಪಿಸಲು ನಿರಂತರ
ದುಡಿದಳು
ನೆಲಕಚ್ಚಿ ಗಟ್ಟಿಯಾಗಿ

ಕೋಮುವಾದಿಗಳಿಗೆ
ದುಷ್ಟ ಭ್ರಷ್ಟರಿಗೆ
ಆದಳು ನಾರಿ
ಸಿಂಹಸ್ವಪ್ನ

ಸಹಿಸಲಿಕ್ಕಾಗಲಿಲ್ಲ
ಇವಳ ಬೆಳವಣಿಗೆ
ತಮ್ಮ ಗೋರಿ
ಕಟ್ಟುವಳೆಂದು ತಿಳಿದ
ಖದಿಮರು

ಸ಼ಂಚು ಹೂಡಿದರು
ಮೆಲ್ಲ ಮೆಲ್ಲನೆ
ಗುಂಡು ಹಾರಿಸಿ
ಜೀವ ಉರುಳಿಸಿದರು

ಸತ್ಯದ ನಾಶಮಾಡಿ
ಮೆರೆದರು ಕೋಮುವಾದಿಗಳು
ಇಂದಿಗೂ ನ್ಯಾಯ
ಸಿಗಲಿಲ್ಲ ಗೌರಿಗೆ

———————————————-

ಜಯದೇವಿ ಆರ್ ಯದಲಾಪೂರೆ

Leave a Reply

Back To Top