ಮರಣ ಮೃದಂಗ-ಡಾ ಅನ್ನಪೂರ್ಣ ಹಿರೇಮಠ

ಕಾವ್ಯಸಂಗಾತಿ

ಮರಣ ಮೃದಂಗ

ಡಾ ಅನ್ನಪೂರ್ಣ ಹಿರೇಮಠ

ಮರಣ ಮೃದಂಗ ಬಾರಿಸದಿರದು ಒಮ್ಮೆ
ಬಂದಾಗ ಹೋಗಬೇಕು ನಾವು ಸುಮ್ಮನೆ//ಪ//

ಹುಟ್ಟಿದ ಗಳಿಗೆಯಿಂದಲೇ ಬೆನ್ನತ್ತಿಹುದು
ಬಿಟ್ಟುಬಿಡದೆ ಕಾಡುತಲೆ ಇಹುದು
ಗಟ್ಟಿಯಾಗಿರದೆ ಬಾಳಲು ಬಿಡದು
ಮೆಟ್ಟಿ ನಿಂತು ಬಾಳದಿರೆ ಬದುಕೇ ಇರದು//

ಬಾಳು ಒಂದು ಎಲ್ಲ ತುಂಬಿದ ಸಂತೆ
ಕಷ್ಟ ಸುಖ ಇಹವಿಲ್ಲಿ ಕಂತೆ ಕಂತೆ
ಬಾಳಿ ಬದುಕಿ ಹೋಗಬೇಕು ಮರೆಯದಂತೆ
ಕಾಯಕದಲಿ ನೆಮ್ಮದಿ ಕಾಣಬೇಕು ಬಿಟ್ಟು ಚಿಂತೆ//

ಹುಟ್ಟುಸಾವಿನ ಜೀವನದಿ ಜಟ್ಟಿಯಾಗಿರಬೇಕು
ಸಾಧಿಸುವ ಛಲದಿ ದಿಟ್ಟ ನಡೆಯಿರಬೇಕು
ಸುಟ್ಟ ಮಣ್ಣಂತೆ ಅಟ್ಟ ಅಡಿಗೆಯಂತಿರಬೇಕು
ಕೆಟ್ಟಕೆಲಸಗಳ ಬಿಟ್ಟು ಸಾರ್ಥಕತೆ, ಹಾದಿಯಲಿರಬೇಕು//

ದೇವದೇವನ ಪಾದವ ಸೇರಲು
ತನ್ನ ಸುಖದಲಿ ಇತರರ ಸುಖ ಕಾಣಲು
ಪರಹಿತ ಪರೋಪಕಾರದಲಿ ಮನವಿಡಲು
ಮರಣದಲೆ ಮಹಾನಮಾಮಿ ಆಗಲು//

ನಿನ್ನತನ ನಿಜದ ಗುಣ ಹೊಂದುತ
ನಡೆ ನುಡಿಯಲೊಂದಾದ ಬಾಳ್ವೆ ಬಾಳುತ
ನೀತಿ ನಿಯಮ ಸತ್ಯ ಸಂದತೆ ಅರಳಿಸುತ
ಮರಣವ ಗೆದ್ದು ಬಾಳಬೇಕು ನಗುತ//

ಸಾರ್ಥಕವಾಗಿರಬೇಕು ನಮ್ಮ ಪಯಣ
ಏರಿ ನಿಲ್ಲಬೇಕು ಗುರಿಯ ಗಗನ
ಸೆಳೆಯುವಂತಿರಬೇಕು ಶಿವನ ನಯನ
ಸತ್ತರೂ ಇದ್ದಂತಿರಬೇಕು ನಮ್ಮ ಜೀವನ//


ಡಾ ಅನ್ನಪೂರ್ಣ ಹಿರೇಮಠ

3 thoughts on “ಮರಣ ಮೃದಂಗ-ಡಾ ಅನ್ನಪೂರ್ಣ ಹಿರೇಮಠ

  1. ಕವನದ ಕೊನೇ ಪ್ಯಾರಾ ತುಂಬಾ ಅರ್ಥಗರ್ಭಿತ ವಾಗಿದೆ. ಕವನ ತುಂಬಾ ಚೆನ್ನಾಗಿದೆ

  2. ಅರ್ಥಪೂರ್ಣ ಕವನ ಕೊನೆಯ ಸಾಲುಗಳು ಮಾರ್ಮಿಕವಾದದ್ದು.

Leave a Reply

Back To Top