ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸತ್ಯ

ಇಮಾಮ್ ಮದ್ಗಾರ

ನಾನೊಬ್ಬ ಮುಸ್ಲಿಂ
ಮಸೀದಿಗೆ ಹೋಗಿದ್ದೆ
ನಮಾಜು ಮಾಡಿ
ನನ್ನ ತಪ್ಪುಗಳ ಮಾಫ್
ಮಾಡು ಎಂದು
ದುವಾಃ ಮಾಡಲು

ನಾನೊಬ್ಬ ಹಿಂದು
ಮಂದಿರಕ್ಕೆ ಹೋಗಿದ್ದೆ
ಕ್ಷೀರಾಭಿಷೇಕ ಮಾಡಿಸಿ
ನನ್ನ ತಪ್ಪುಗಳ
ಮನ್ನಿಸೆಂದು ಪ್ರಾರ್ಥಿಸಲು

ನಾನೊಬ್ಬ ಕ್ರೈಸ್ತ
ಚರ್ಚಗೆ ಹೋಗಿದ್ದೆ
ಮೊಂಬತ್ತಿ ಬೆಳಗಿಸಿ
ನನ್ನ ಕೆಟ್ಟ ಕರ್ಮಗಳ
ಸುಟ್ಟು ಬಿಡು ಎಂದು
ಮನವಿ ಮಾಡಲು

ಮಸೀದಿಯಲಿ
ಮಮಕಾರವಿತ್ತು
ಮಂದಿರದಲಿ
ಮಮತೆಯಿತ್ತು
ಚರ್ಚಿನಲಿ
ಮಧುರತೆ ಇತ್ತು

ನನಗೆಲ್ಲೂ…..
ಜಾತಿಗಳ ಪೆಡಂಭೂತ
ಕಾಣಲಿಲ್ಲ

ಕೇ..ವಲ

ನಮ್ಮ ತಪ್ಪುಗಳ
ಮನ್ನಿಸೆಂದು
ಮನವಿ ಮಾಡುವ
ಮಾನುಷರೇ..
ಬಹಳಿದ್ದರು
ನನ್ನ ನಿಮ್ಮ ಹಾಗೇ…
ತಪ್ಪು ಮಾಡಿದವರೇ..!!!
.

ಮಸೀದಿ ಮಂದಿರ
ಚರ್ಚಗಳಲಿ
ಮಲೀ…ನವಿಲ್ಲದ
ಮಾನವೀ‌‌‌‌…ಯತೆ
ಕಂಡು ನನ್ನ ಮನಸು
ಮಾನವನಾಗಿದ್ದಕ್ಕೆ
ಹೆಮ್ಮೆಪಟ್ಟಿತ್ತು

ಆ…ದರೆ ??

ಈ ಜಾತಿ ವಿಜಾತಿಗಳ
ಜಗಳ ವೇಕಿದೇ..??
ಎಂಬ ಸವಾಲು
ಸಮಂಜಸ ಉತ್ತರ ವಿಲ್ಲದೇ…

ಕಾಡಿದ್ದಂತೂ…
ಸತ್ಯ !!!


ಇಮಾಮ್ ಮದ್ಗಾರ

About The Author

Leave a Reply

You cannot copy content of this page

Scroll to Top