ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಬೂದಿಯಾದ ಬದುಕಿನಲ್ಲಿ ನಿರಾಶೆ
ಹುಟ್ಟಿತಲ್ಲ ಇಂದು
ಹೊತ್ತಿ ಉರಿವ ವಹ್ನಿಯಲಿ ಭಾವಗಳ
ಸುಟ್ಟಿತಲ್ಲ ಇಂದು

ದುಃಖದ ಕಡಲಲ್ಲಿ ಶಂಖದೊಳಗಿನ
ಹುಳುವಾದೆ ನಾನು
ಶವಗಳ ರಾಶಿಯನು ಕಂಗಳೆದುರಲ್ಲಿ
ಒಟ್ಟಿತಲ್ಲ ಇಂದು

ಜೀವವನ್ನು ಕಸಿಯುವ ದೇವರಿಗೆ
ಕಿಂಚಿತ್ತು ಕರುಣೆಯಿಲ್ಲ
ಮುಗ್ದಹೃದಯಗಳ ಅಳಲು ಮುಗಿಲು
ಮುಟ್ಟಿತಲ್ಲ ಇಂದು

ತುಮುಲದ ಮನಸು ವಿಲಿವಿಲಿ
ಒದ್ದಾಡುವ ಮೀನಾಗಿದೆ
ಕಂಬನಿಧಾರೆ ಹರಿದು ಶೋಕಕೆರೆಯ
ಕಟ್ಟಿತಲ್ಲ ಇಂದು

ಕ್ರೂರಿತನಕೆ ಧಿಕ್ಕಾರ ಕೂಗಿದನಲ್ಲ
ಪ್ರಲಾಪಿಸುತ ಅಭಿನವ
ಸಾಂತ್ವನದ ಸಂಕಲ್ಪವನು ಕವಿತೆಯು
ತೊಟ್ಟಿತಲ್ಲ ಇಂದು


About The Author

Leave a Reply

You cannot copy content of this page

Scroll to Top