ಕಾಡಜ್ಜಿ ಮಂಜುನಾಥ ಕವಿತೆ-ಸಂಸಾರ ಸಾಗರ

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಸಂಸಾರ ಸಾಗರ

ಸಂಸಾರ ಸಾಗರದಿ
ಈಜಲು ಮನವಾಗಬೇಕು
ಶಾಂತಸಾಗರ,
ಅಹಂಕಾರದ ಕೋಟೆಯ
ಮನದಲಿ ಕಟ್ಟಿ,
ಒಲವಿನ ಹೃದಯವ
ದೂರದಿ ಅಟ್ಟಿದರೆ
ಬದುಕು
ಮೂರಾಬಟ್ಟೆ,
ನಂಬಿಕೆಯ
ಗೋಡೆಯೇ ಬಿರುಕಾಗಿ
ಮಾತಿನ ಸಿಡಿಲಿಗೆ
ಸಂಬಂಧ ಪುಡಿಯಾದ
ಮಣ್ಣಂಗಟ್ಟಿ;
ಹಣ ಅಧಿಕಾರದ
ಮದವು,ಜೀವನ
ಮುಳುಗಿಸುವ
ಪ್ರವಾಹವು,
ಚಟದ ಗಂಡಿಗೆ
ಹಟದ ಹೆಣ್ಣಿಗೆ
ಜೀವನ
ಸಿಗರೇಟಿನ ಹೊಗೆಯಂತೆ
ಎಳೆದಾಗ ಸವಿ,ಬಿಟ್ಟಾಗ
ವಿಷದಂತೆ ಭವಿಷ್ಯ
ನರಕ,
ಮನಸರಿಯದ ಎದೆಗಳು
ಚಾಡಿಕೋರರ ಬಾಯಿಗೆ
ಆಹಾರ,
ಬದುಕಿನ ವಿನಾಶಕ್ಕೆ
ತಾವೇ ಮಾಡಿಕೊಂಡ
ಸಂಚಕಾರ !!


Leave a Reply

Back To Top