ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ಒಣಗಿ ಮುರುಟಿದೆ ಬನದ ಹಸಿರು ನೀ ಬಾರದೆ
ಬಿರಿದು ಬಾಯ್ತೆರೆದಿದೆ ನೆಲದ ಕೆಸರು ನೀ ಬಾರದೆ

ಇಂಗುತಿದೆ ಬಿಡದೆ ಜಿನುಗಿದ ನೀರೆಲ್ಲ ಒರತೆಯಲಿ ಮೆಲ್ಲಗೆ
ಬಿಡುತಿದೆ ಬಾಯಾರಿದ ಹಕ್ಕಿ ಕುತ್ತುಸಿರು ನೀ ಬಾರದೆ

ಸುಡುತಿದೆ ಕೆಂಡವಾಗಿ ಬೀಸೋ ಗಾಳಿ ಮೈಗೆ ಸೋಕಿ
ಕುದಿಯುತಿದೆ ತಣ್ಣಗೆ ಹಸಿದ ಬಸಿರು ನೀ ಬಾರದೆ

ಕಾಡುತಿಹೆ ಏಕೆ ಜೀವಕುಲವ ಕಾರ್ಮೋಡವೇ ಸುರಿಯದೆ
ಉಕ್ಕುತ್ತಿದೆ ಕಂಗೆಟ್ಟು ಭುವಿಯೆದೆಯ ಎಸರು ನೀ ಬಾರದೆ

ಜೀವಚ್ಛವದಿ ಒರಗಿವೆ ಬೀಜಗಳೆಲ್ಲ ಸೋತು ಬೇಗಂ
ಜಪಿಸುತಿಹ ರೈತ ಬಿಕ್ಕಿ ನಿನದೇ ಹೆಸರು ನೀ ಬಾರದೆ


ಹಮೀದಾ ಬೇಗಂ ದೇಸಾಯಿ

About The Author

Leave a Reply

You cannot copy content of this page

Scroll to Top