ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಮಳೆ ಬರಲಿ

ಮಳೆ ಬರಲಿ ವಸುಧಿಶ
ಬಿತ್ತುವೇನು ಬಸವೇಶಾ
ದನ ಕರುಗಳು ಹಸಿದಿವೆ
ಕಾಯೋ ನೀ ಪರಮೇಶ

ಬಿರುಕು ನೆಲದಲಿ ಬದುಕು
ರೈತ ಕಾರ್ಮಿಕರ ದುಗುಡು
ತುಂತುರು ಹನಿ ಮಳೆಗೆ
ನೆಲವೆಲ್ಲ ಸೊಗಡು

ತೆನೆಗಳೆದ್ದು ಮೆರೆಯಲಿ
ಹುಲುಸು ಜೋಳ ರಾಗಿ
ಮೈ ಮುರಿದು ದುಡಿದವನೆ
ಕಾಯಕದ ಯೋಗಿ

ಕೈ ಮುಗಿದು ಬೇಡುವೆನು
ಕೃಪೆಯಾಗು ಮಳೆರಾಜ
ಸರಿಸಿ ಕೋಪ ಮುನಿಸು
ಜೀವ ಜಾಲವ ಹರಿಸು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

1 thought on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಮಳೆ ಬರಲಿ”

  1. Geeta banakar

    ರೈತ ಕಾರ್ಮಿಕರ ದುಗುಡ ದುಃಖ ದೂರ ಮಾಡುವ ಮಳೆಯ ಕುರಿತ ಕವನ ತುಂಬಾ ಚೆನ್ನಾಗಿದೆ ಸರ್

Leave a Reply

You cannot copy content of this page

Scroll to Top