ಮೇ-ದಿನದ ವಿಶೇಷ

ನಾಗರತ್ನ ಎಚ್ ಗಂಗಾವತಿ.

ಶ್ರಮದ ಬೆಳಕು

ಹಗಲು ಇರುಳು ಎನ್ನದೆ
ಶ್ರಮದಿ ದುಡಿದು ನಲಿಯುವರು.

ಅತ್ತ ಕಂದಮ್ಮಗಳಿಗೆ
ಜೋಗುಳವಾಡಿ ಸಾಕಿದವರು.

ಬಿಸಿಲಿನ ತಾಪದಲ್ಲಿ
ನೊಂದು ಬೆಂದವರು.

ಮಹಡಿ ಮಹಾಲುಗಳಿಗೆ
ಮೆರಗು ಕೊಟ್ಟವರು.

ತಮ್ಮ ಜೀವದ ಹಂಗು
ತೊರೆದು ದುಡಿದವರು.

ನಾನು ನೀನು ಎನ್ನದೆ .
ಜೊತೆಯಾಗಿ ಕೆಲಸ ಮಾಡುವರು.

ಕಷ್ಟ ಸುಖದಿ ಒಂದಾಗಿ
ಎಲ್ಲರೊಟ್ಟಿಗೆ ನಕ್ಕು ನಲಿವರು.

ಕನಸಿನ ಗೋಪುರ ಹೊತ್ತು
ಕೈತುತ್ತ ಉಣಿಸಿದವರು.

ನೆಮ್ಮದಿ ಜೀವನ ನಡೆಸುತಲಿ
ಮಕ್ಕಳಿಗೆ ಶಿಕ್ಷಣ ಕೊಡಿಸಿದವರು.

ಶ್ರಮದ ಬದುಕಲಿ
ಬೆಳಕ ಕಂಡು ನಡೆದವರು.


ನಾಗರತ್ನ ಎಚ್ ಗಂಗಾವತಿ.

2 thoughts on “

Leave a Reply

Back To Top