ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸವ ಜಯಂತಿ ವಿಶೇಷ

ಆಧುನಿಕ ವಚನಗಳು

ಗೊರೂರು ಅನಂತರಾಜು

. ನಮ್ಮೂರ ಸಾಲ ಮಾಡುವ ಸಿದ್ದರಾಮ
ಸಾಲ ಕೊಡುವ ಕೋದಂಡರಾಮ
ಇಬ್ಬರೂ ಒಂದನಂತೂ
ಬಿಡುತ್ತಿಲ್ಲವಯ್ಯ
ಸಿದ್ದರಾಮನ ಕರುಳು ತೂತು ಬಿದ್ದರೂ ಕುಡಿಯುವುದು ಕುಡಿಯುವುದು ಬಿಡುತ್ತಿಲ್ಲ
ಕೋದಂಡರಾಮನಿಗೆ ಮಧು ಮೇಹ
ಏರುತ್ತಿದ್ದರೂ ಮೀಟರ್ ಬಡ್ಡಿ ವ್ಯಾಮೋಹದ ವ್ಯಸನವು ಕಾಣ
ಗೊರವೂರ ತ್ರಿಕೂಟಲಿಂಗೇಶ್ವರ

  1. ಭತ್ತವನ್ನು ಅಕ್ಕಿ ಮಾಡುವುದು ರೈಸ್ ಮಿಲ್
    ರಾಗಿಯನ್ನು ಹಿಟ್ಟು ಮಾಡುವುದು
    ಫ್ಲೋರ್ ಆಂಡ್ ಹಲ್ಲರ್ ಮಿಲ್
    ಇವುಗಳ ಕಂಡು ಹಿಡಿದವನು ಮನುಜನಯ್ಯ
    ಅನ್ನ ಆಹಾರವನ್ನು ಕರಗಿಸುವ
    ಮನುಜನ ಕರುಳು ಸೃಷ್ಟಿಸಿದ ಕರುಣಾಳು ಯಾರು ಗೊರವೂರ ತ್ರಿಕೂಟಲಿಂಗೇಶ್ವರ
  2. —————————————————-

    About The Author

    Leave a Reply

    You cannot copy content of this page

    Scroll to Top