ಶ್ರೀಕಾಂತಯ್ಯ ಮಠ ರವರ- ಹಾಯ್ಕುಗಳು

ಕಾವ್ಯ ಸಂಗಾತಿ

ಶ್ರೀಕಾಂತಯ್ಯ ಮಠ

ಹಾಯ್ಕುಗಳು


ಸುಖವೆಂದರೆ
ಹಣ ಆಸ್ತಿ ಅಂತಸ್ತು
ಇದುವೆ ಭೃಮೆ.

ನೋವೇಕೆ ಹೀಗೆ
ನಿನ್ನೊಳು ಬಂಧಿಯಾದೆ
ಅಪರಾಧವೆ..?

ಸಾವಿನ ಸೌಧ
ನೆಲದ ಅಲಂಕಾರ
ಶವ ಸತ್ಕಾರ.

ಅವಳ ರೂಪ
ಮನಸ್ಸು ಪರಿಣಾಮ
ಚಂದ್ರ ಸಾಟಿಯೆ.

ಮನುಷ್ಯ ಒಂದೆ
ಹೆಸರು ರೂಪ ಜಾತಿ
ದ್ವಿಮುಖ ದೇಹ.

ಸೂರ್ಯ ಬಂದನು
ಕರ್ತವ್ಯಕ್ಕೆ ಹಾಜರು
ಎಚ್ಚರಿಸಿದ.

ನೆಮ್ಮದಿ ಬೇಕು
ಬದುಕುವ ವಿಜ್ಞಾನ
ಕೈಗೆ ಜಗತ್ತು.

ಕಾಣುವ ದೇಹ
ಒಳೊಳಗೆ ಸಂದೇಹ
ಮತ್ಸರ ಗುಣ.

ನನ್ನ ಬಿಟ್ಟಳು
ಕೊನೆ ಘಳಿಗೆ ಕಾಲ
ಹೃದಯ ಹೀನ.
೧೦
ಹೃದಯ ಪ್ರೀತಿ
ಮನವರಿಕೆಯಿಲ್ಲ
ಕಾಣಿಕೆ ಏಕೆ..?


Leave a Reply

Back To Top