ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಬೇಡ್ಕರ್ ಜಯಂತಿ ವಿಶೇಷ

ರೋಹಿಣಿ ಯಾದವಾಡ

ಗಜಲ್

ಅಳಿಸಲಾಗದ ಕಾನೂನು ರಚಿಸಿ ನ್ಯಾಯಪರನಾದೆ ನೀ ಅಂಬೇಡ್ಕರ
ಧಮನಿತರ ಶೋಷಣೆಗೆ ಸಿಡಿದು ಬಾಸ್ಕರನಾದೆ ನೀ ಅಂಬೇಡ್ಕರ

ಶತ ಶತಮಾನದಲೂ ನಡೆಯುತಿದೆ ದಲಿತರ ಮೇಲೆ ಶೋಷಣೆ
ಅಕ್ಷರವೇ ಶೋಷಣೆ ಅಳಿಸಲು ಸಮನಾದ ಅಸ್ತ್ರವೆಂದೆ ನೀ ಅಂಬೇಡ್ಕರ

ಸಂಪ್ರದಾಯದ ಸಂಕೋಲೆಯಲಿ ಬಂಧಿಸುವ ಹುನ್ನಾರು ಇಲ್ಲಿಯದು
ಗೊಡ್ಡು ಸಂಪ್ರದಾಯಗಳ ತಿಲಾಂಜಲಿಗೆ ಅರಿವು ಮೂಡಿಸಿದೆ ನೀ ಅಂಬೇಡ್ಕರ

ಮೂಲಭೂತವಾದಿಗಳ ಅಟ್ಟಹಾಸಕೆ ಕೊನೆಯಿಲ್ಲದ ಪಯಣ ಸಾಗಿತ್ತು ಇಲ್ಲಿ
ಕಾನೂನು ಪಾಂಡಿತ್ಯಗಳಿಸಿ ಕೆಳಸ್ತರಕ್ಕೆ ಧ್ವನಿಯಾದೆ ನೀ ಅಂಬೇಡ್ಕರ

ಎಲ್ಲದಕ್ಕೂ ಮನಸ್ಸೆ ಮೂಲ ಎಂಬುದು ಅಳಿಸಲಾಗದ ಸತ್ಯವೆಂಬುದು ತಿಳಿ
ಮನಸ್ಸಿನ ಅಭಿವೃದ್ಧಿ ಮಾನವ ಜನಾಂಗದ ಅಂತಿಮ ಗುರಿ ಎಂದೆ ನೀ ಅಂಬೇಡ್ಕರ

ನೊಂದವರ ನೋವು ನೋಯದವರೆತ್ತ ಬಲ್ಲರು ಎಂಬುದು ದಿಟ
ಅವಮಾನದಿ ನೊಂದು ನೊಂದವರ ಬಾಳಿಗೆ ದಾರಿ ತೋರಿದೆ ನೀ ಅಂಬೇಡ್ಕರ

ಬುದ್ಧನ ಶಾಂತಿ ಬಸವಣ ಕ್ರಾಂತಿಯ ಮುಂದುವರಿಕೆ ನೀನೆಂದಳಾ ರೋಹಿ
ಅಕ್ಷರದಲ್ಲಿ ಸಂವಿಧಾನ ರಚಿಸಿ ಸಮತೆಯ ಶಿಲ್ಪಿಯಾದೆ ನೀ ಅಂಬೇಡ್ಕರ.


About The Author

Leave a Reply

You cannot copy content of this page

Scroll to Top