ಇತರೆ April 14, 2023April 14, 2023admin ಅಂಬೇಡ್ಕರ್ ಜಯಂತಿ ವಿಶೇಷ ವಿಶಾಲ್ ಮ್ಯಾಸರ್ “ಕಾಣೆಯಾಗುತ್ತಾರೆ” ರಾತ್ರಿಗೆ ಅದೆಷ್ಟು ಕಗ್ಗಂಟುಗಳುಆಕಾಶದಲ್ಲಿ ,ಭೂಮಿಯಲ್ಲಿಬೆಡ್ರುಮಿನ ಹಾಸಿಗೆಯಲ್ಲಿನಡುಬೀದಿಯಲ್ಲಿ ಸಂಸಾರ ಹೂಡಿದ ನಾಯಿಗಳಂತೆ ಮಲಗಿರುತ್ತವೆಹೌದು ಜಗವೆಲ್ಲ ಮಲಗಿರುತ್ತದೆಸೂರ್ಯನ ಮಕ್ಕಳೆಲ್ಲ ಮಲಗಿರುತ್ತಾರೆಆದರೆ ಆದರೇ ಚಂದಿರ ರಾತ್ರಿಗೆ ಪಹರೆ ಕುಂತಿರುತ್ತಾನೆ ನಕ್ಷತ್ರಗಳ ಜೊತೆಗೆ,ಅಮಾಸಿಯ ರಾತ್ರಿಗೆ ನಕ್ಷತ್ರಗಳೆಲ್ಲ ಹೊಂಚು ಹಾಕುತ್ತಲೇ ಇರುತ್ತವೆನದಿ ತಣ್ಣನೆ ಹರಿಯುತ್ತಿರುತ್ತದೆಗಾಳಿ ತಂಪಾಗಿ ಬೀಸುತ್ತಿರುತ್ತದೆರೈಲು ನಿಶಬ್ಧದ ಹೊಟ್ಟೆ ತೂರಿ ತಾಳ ಹಾಕುತ್ತಾ ಚಲಿಸುತ್ತದೆಇವಷ್ಟೇ ಅಲ್ಲ ಅದೆಷ್ಟೋ ಕನಸುಗಳು ರಾತ್ರಿಗೆ ನನಸಾಗುತ್ತವೆ ಮತ್ತು ಸತ್ತುಹೋಗುತ್ತವೆದಂದೆಗಳ ಲಿಸ್ಟಿಗೆ ಹೊಸದೊಂದು ಸೇರ್ಪಡೆದುಡಿದು ದಣಿದು ಗೇಣುದ್ದ ಜಾಗದಲ್ಲಿ ಬೆಚ್ಚಗೆ ಮಲಗಿದ್ದ ಬೆವರ ಮಕ್ಕಳು ಕಾಣೆಯಾಗಿ ಬಿಡುತ್ತಾರೆಹೌದು ಕಾಣೆಯಾಗುತ್ತಾರೆಮುಂಜಾನೆಗೆ ಬೆವರೆಲ್ಲ ರಕ್ತವಾಗಿ ಹರಿಯುತ್ತದೆಸ್ವಲ್ಪ ಹೊತ್ತಿಗೆ ಹೆಪ್ಪುಗಟ್ಟಿ ದನ ತಿನ್ನುವವರ, ಅಜಾ ಕೂಗುವವರ ಚಹರೆ ಪಡುತ್ತದೆಸಂಜೆಗೆ ನೆತ್ತರು, ಮಾಂಸ ಕೊಳೆತು ಉರೋಟು ನಾತನಾತ ನಾತ ನಾತಕೊಲೆಯಾದವರಿಗೆ ದೇಶದ್ರೋಹಿಗಳು ಪಟ್ಟಕೊಂದವರೆಲ್ಲರೂ ದೇಶಪ್ರೇಮಿಗಳುಎಚ್ಚರ ಎಚ್ಚರ ಅಣ್ಣಗಳಿರಾ ಎಚ್ಚರಒಂದು ದಿನ ದೇಶದ್ರೋಹಿಗಳ ಪಾಳಿ ಮುಗಿದುಹೋಗುತ್ತದೆಮರುದಿನದ ದಾಹಕ್ಕೆ ದೇಶಭಕ್ತರದ್ದೆ ನೆತ್ತರು,ಹಸಿವಿಗೆ ಮತ ಹೊತ್ತ ಮೈಗಳೆ ಬೇಕು…. Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window) admin
ಇತರೆ May 18, 2024May 18, 2024admin ಯುವ ಶಕ್ತಿ ದೇಶದ ಸಮಾಜದ ಭವ್ಯ ಶಕ್ತಿ ..!ಕಟ್ಟೆ ಎಂ ಎಸ್ ಕೃಷ್ಣಸ್ವಾಮಿಯವರ ಲೇಖನ