ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ

ಕೋಟೆ ಕುಸಿದಿದೆ

ಬಿಟ್ಟು ಬಿಡಿ
ಬಿಸಿಲು ಬೆಗೆ
ಬೆಂಕಿ ಒಡಲಲಿ
ಹೊತ್ತಿ ಉರಿದಿದೆ

ಸ್ನೇಹ ತಂಪು
ಎರಕ ಸಿಂಚರ
ನೆರಳು ಕನಸು
ಮರೀಚಿಕೆ

ನನ್ನದೆಂದು ಅಪ್ಪಿಕೊಂಡೆ
ಉಸಿರುಗಟ್ಟಿದ ಬಂಧನ
ಪ್ರೀತಿಯಿಂದ ಮುತ್ತು ಕೊಟ್ಟರೆ
ತುಟಿಗೆ ದೀಪದ ಶಾಖವು

ಮಧುರ ಭಾವಕೆ
ಬಿರುಕು ಬೇಸರ
ಹೃದಯ ಪ್ರೇಮ
ಕೋಟೆ ಕುಸಿದಿದೆ

ನಿನ್ನ ನೆಲದಲಿ
ಗಟ್ಟಿ ಗೊಳ್ಳು
ಬೇಡ ಮತ್ತೆ
ಒಲುಮೆಯ


About The Author

Leave a Reply

You cannot copy content of this page

Scroll to Top