ಭಾರತಿ ಅಶೋಕ್ ಕವಿತೆ-ಮನದಂಗಳ ಗುಡಿಸುವಾಗ..

ಕಾವ್ಯ ಸಂಗಾತಿ

ಭಾರತಿ ಅಶೋಕ್

ಮನದಂಗಳ ಗುಡಿಸುವಾಗ..

)

ಮುಂಜಾವಿನಲಿ
ಅಂತರಂಗದ ಕದವ ತೆರೆಯಲು
ಮನದ ಮೈಗೆ ತಾಗಿದ ಬಿಸಿಗಾಳಿಯಲೇ
ನಿನ್ನುಸಿರ ಕಲರವ ಕಂಡು ಬಾಗಿಲ ಮುಚ್ಚಿದೆ
ತೂರಿ ಹೊಗದಂತೆ ಒಡಲ ತುಂಬಿಕೊಳಲು.

ಹೃದಯ ಗೂಡನು ಜಾಡಿಸಿ ಗುಡಿಸುವಾಗ
ಕಂಡ ಹೆಜ್ಜೆಯ ಗುರುತುಗಳು
ನಿನ್ನವೆಂದು ಅರಿತಾದ ಮೇಲೆ
ಗುಡಿಸದೇ ಶೃಂಗರಿಸಿ ಕಾಪಿಡುವೆ
ಅಳಿಸದಂತೆ.

ಇರುಳೆಲ್ಲಾ ನೀನಡೆದ ಎದೆ ಭೂಮಿಯಲಿ ನೆನಪುಗಳ ಮೆರೆವಣಿಗೆ ಅನುರಣನ
ಮೂಲೆ ಮೂಲೆಯಲು ಚೈತ್ಯನ್ಯದ ನರ್ತನ
ನರ್ತಿಸುತಿರಲಿ ಸದಾ ಸ್ಪೂರ್ತಿಯಾಗಿರುವೆ..


Leave a Reply

Back To Top