ಆದಪ್ಪ ಹೆಂಬಾ ಮಸ್ಕಿ-ನಿತ್ಯ ವಂದಿಪರು

ಕಾವ್ಯ ಸಂಗಾತಿ

ಆದಪ್ಪ ಹೆಂಬಾ ಮಸ್ಕಿ

ನಿತ್ಯ ವಂದಿಪರು

ನಿದ್ದೆಯಿಂದೆದ್ದ ಸಿದ್ಧ
ಬುದ್ಧನಾದ
ಸಂಸಾರವನು ಗೆದ್ದ ವರ್ಧಮಾನ
ಮಹಾವೀರನಾದ ||

ಕಾಯಕವೇ ಕೈಲಾಸವೆಂದ
ಬಸವ ದೇವಮಾನವನಾದ
ಸತ್ಯವೇ ನಿತ್ಯವೆಂದ ಗಾಂಧಿ
ಹುತಾತ್ಮನಾದ ||

ಎಲ್ಲರಲೂ ಕಂಡದ್ದು
ವೈರಾಗ್ಯ ಭಾಗ್ಯ
ಸರಳ ಜೀವನ ಮಾರ್ಗ
ತರವಲ್ಲ ಭೋಗ ಲಾಲಸೆ
ಆಸೆ ತೊರೆದು ಬದುಕುವುದೇ ಯೋಗ್ಯ ||

ದಾರ್ಶನಿಕರ ಬದುಕ ನೋಡಿಯೂ
ಮನುಜ
ಭೋಗ ಭಾಗ್ಯಗಳ ತೊರೆದು
ಬದುಕಲಾರ
ಬುದ್ಧ, ಬಸವ, ಮಹಾವೀರ ಗಾಂಧಿಯ
ತಿಳಿದು ಕಲಿಯಲಾರ ||

ಜಗಕೆ ಆ ದಿವ್ಯ ಚೇತನಗಳ
ಕೃಪೆ ಸದಾ ಇರಲಿ
ಮನುಜನರಿವಿನ ಬುತ್ತಿ
ಆರದಿರಲಿ
ನಿತ್ಯ ವಂದಿಪರು ಭುವಿಗೆ
ಅವತರಿಸುತಲೇ ಇರಲಿ||

———————————————————-

Leave a Reply

Back To Top