ಪಿ ಎಸ್ ದೇಸಾಯ್ ರವರ ಗಜಲ್

ಕಾವ್ಯ ಸಂಗಾತಿ

ಪಿ ಎಸ್ ದೇಸಾಯ್.

ಗಜಲ್

ದುರುಳರ ಗಾಳಕೆ ಸಿಗುವ ಮೀನು
ನೀನಾಗಬಾರದು ಗೆಳತಿ..
ಮರುಳಾಗಿ ನಿನ್ನೊಳಗಿನ ಅರಿವು
ಮರೆಯಬಾರದು ಗೆಳತಿ..

ಸಾಹಿತ್ಯದ ಸಖ್ಯ ಮೆರೆಸಿತು
ಓದುಗರ ಎದೆಬನದಿ ಹೂವಾಗಿ..
ಈಸಿ ಜಯಿಸುವ ಜಾಡುಹಿಡಿದು ಹಿಂದೆ ನೋಡಬಾರದು ಗೆಳತಿ..

ಆಪಾದನೆಗಳ ಹೊತ್ತ ಬದುಕು ನಿಸ್ಸಾರವೆಂದು ದುಡುಕಿದೆಯಾ.
ಸೋಪಾನದ ಸೆಳೆತಗಳಿಗೆ ಸೋತು
ಬಲಿಯಾಗಬಾರದು ಗೆಳತಿ..

ಒಡಲ ಚಿಗುರು ಬಳ್ಳಿಗಳ ಆಸರೆಯ ಹೊಣೆ ಬೇರು ಹೊರಬೇಕು..
ಬರಹ ಅಸ್ತ್ರವಾದಾಗ ಸಾವಿಗೆ ಕದ ತೆರೆಯಬಾರದು ಗೆಳತಿ..

ಹುಸಿ ಬೆಳಕು ನಂಬಿ ಮಸಿ ಮೆತ್ತಿಸಿಕೊಂಡೆ ತಿರುಗಿಯೂ ನೋಡದೆ
ಶಿವೆ ಬುದ್ದಿ ಹೇಳಿದಳು ತಿದ್ದಿ
ಸಸ್ತಾ ಸರಕಾಗಬಾರದು ಗೆಳತಿ.


Leave a Reply

Back To Top