ಯುಗಾದಿ ವಿಶೇಷ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಬುದ್ದನ ನೆಲದಲಿ ದಿಗ್ಗನೇ ಎದ್ದವರು..

ತಳವಾರು, ಕತ್ತಿ, ಕೋವಿಗಿಂತಲೂ
ಮಿಗಿಲಾಗಿ
ಬರೀ ನಾಲಿಗೆಯನು ನೆಲಕೆ ಚಾಚಿ
ನಂಜು ಕಾರಿದ ಪರಿಗೆ

ಬುದ್ದನ ನೆಲ ದಿಗ್ಗನೆ ಅದುರಿತು
ಜೀವಿಗಳು ನಡುಗಿದವು

ಜೀಗಿಯುವ ಮಂಗಾಟವಾಡುತ್ತ
ಅಲ್ಲಿ-ಇಲ್ಲಿ-ಎಲ್ಲೆಲ್ಲೂ
ಮೆರೆಯಲು ..
ಬುದ್ದನ ಭೂಮಿಯ ಕಂಪಿಸಲು ಹೊಂಚು ಹಾಕಿದವರು

ಸೌಹಾರ್ದ ಮಣ್ಣಿನೊಲುಮೆಯಲ್ಲಿ ಮತಾಂಧತೆಯ ಬೀಜ ಬಿತ್ತಲು ಬಂದು
ಬುದ್ದನಿಗೆ ಬದ್ದರಾಗದವರು

ಇವರು…

ಬಡವರ
ಬೆವರಿನ ಅನ್ನ ಕಸಿದುಕೊಂಡು ಕಾರ್ಪೋರೇಟ್ ಜಾಲಕ್ಕೆ ಜೋತು ಬಿದ್ದುವರು..

ಬುದ್ದನ ನೆಲದೊಳಗೆ
ಗುದ್ದಾಡಿದವರು

ಅಗೋ ನೋಡಲಿ ..
ಕೇಹೋ, ಕೇಹೋ ಕೇಕೆ ಹಾಕುತ್ತ

ಜೀವಿಗಳ ಸುಡಲು ಹಾತೊರೆಯುತಿರುವರು ..

ಬುದ್ದನ ಶಾಂತಿಯ ನೆಲದಲ್ಲಿ ಅಘೋರ ವಿಜೃಂಭಿತ ಮೆರೆವಣಿಗೆ ಹೊರಟಿಹರು …

ಕೇಸರಿ-ಬಿಳಿ-ಹಸಿರು-ನೇರಲೆ-ಕಂದು ಹಲವು ಬಣ್ಣಗಳ ನೆಲದಲಿ
ಕೆಂಪು ರಕ್ತದೋಕುಳಿಯಾಡಲು
ಹಪಹಪಿಸುತಿಹರು ..

ಅಬಲರ ಮೇಲೆ ಇವರ ದಾಳಿಯ ಮೇಲಾಟಕೆ
ನೆಲ ನಡುಗಿ ಹೋಗಿದೆ

ಮತ್ತೆ ಬಾಯಲ್ಲಿ ನೆಪಮಾತ್ರ
ಬುದ್ದ-ಬಸವ-ಅಂಬೇಡ್ಕರ್ ಧ್ಯಾನ ..


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

2 thoughts on “

  1. ಸತ್ಯದ ದರ್ಶನ ಅದ್ಭುತವಾಗಿದೆ.

Leave a Reply

Back To Top