ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಆತ್ಮದ ಗೋಳು

ಮಧುರಾ ಮೂರ್ತಿ

ಮಧುರಾ ಮೂರ್ತಿ: ಇದ್ದಾಗ ಬಂದು ಮಾತಾಡದ ಬಂಧುಗಳು
ಸತ್ತವನೆದುರು ನಿಂತು ಬಿಕ್ಕುತಿಹರು
ಆತ್ಮೀಯತೆ ತೋರದವರೆಲ್ಲ ಇಂದು
ಚರಣಗಳಿಗೆರಗುತ್ತ ಹೋಗುತಿಹರು

ಊರವರ ಸಲಹೆಯ ದಿಕ್ಕರಿಸಲಾಗದೇ
ಕಟ್ಟಿದರು ಚಟ್ಟವನು ಹೊತ್ತೊಯ್ಯಲು
ಚಿತೆಯಲ್ಲಿ ಮಲಗಿಸಿ ಕೊಳ್ಳಿಯಿಟ್ಟರು
ಸಿದ್ದರಾದರು ತಮ್ಮ ಕನಸುಗಳ ಪಡೆಯಲು

ವಿಧಿವಿಧಾನ ಮುಗಿಸುವಾ ಮೊದಲಲ್ಲೇ
ಆಸ್ತಿ ಹಂಚಿಕೆಗಾಗಿ ಕಲಹ ಮಕ್ಕಳಲ್ಲಿ
ತೊರೆದವನು ತಂದೆಯೆಂಬ ಅರಿವಿಂದ
ಕಾಣದಾಯ್ತು ಬೇಸರ ಮೊಗದಲಿ

ಎಂತಹ ಮಕ್ಕಳಿಗೆ ಜನ್ಮವನು ನೀಡಿದೆ
ಮಕ್ಕಳಭ್ಯುದಯಕೆ ಬದುಕೆಲ್ಲ ಸವೆದೆ
ಕಿಂಚಿತ್ತು ಗೌರವ ಕೊಡಲಿಲ್ಲ ಕೊನೆಗೆ
ಸತ್ತಾಗ ಬರಿ ಬೂದಿ ಬೆಲೆಯೆಂದು ತಿಳಿದೆ


About The Author

Leave a Reply

You cannot copy content of this page

Scroll to Top