ಖಾಕಿಯೊಳಗಿನ ಕವಿ -ನಾಗಪ್ಪ.ಬಿ.ಪಿಎಸ್ಐ ಕವಿತೆ ಸಾರ್ಥಕ ಬದುಕು

ಕಾವ್ಯ ಸಂಗಾತಿ

ಸಾರ್ಥಕ ಬದುಕು

ಖಾಕಿಯೊಳಗಿನ ಕವಿ (ನಾಗಪ್ಪ.ಬಿ.ಪಿಎಸ್ಐ)

ಹನಿ-ಹನಿಯಾಗಿ
ಸುರಿದ ಮಳೆಯು
ತುಸು ಭುವಿಯಲಿಂಗಿ
ಹಳ್ಳ-ಕೊಳ್ಳವಾಗಿ
ಕೆರೆಯ ಸೇರಿ ಹೊಳೆಯಾಗಿ ಹರಿದು
ನದಿಯ ಸೇರುವುದು
ನೀರಿಗೆ ನದಿಯೂ ಕೊನೆಯಲ್ಲ….

ಕಾಡು-ಮೇಡು
ಗಿರಿ-ಕಂದರಗಳಲಿ
ಬಾಗಿ- ಬಳುಕಿ
ಕೆಳಗೆ ಬಿದ್ದು
ಹಾಗೆಯೇ ಮೇಲೆದ್ದು
ಜರಿ-ತೋರೆಗಳನು ತನ್ನೊಡಲಲಿ ಸೇರಿಸಿಕೊಂಡು
ಸಾಗರದಲಿ ಕೊನೆಗೆ
ತಾ ಲೀನವಾಗುವುದು…

ತನ್ನ ಪಯಣದುದ್ದಕ್ಕೂ
ತನಗಲ್ಲದಿದ್ದರೂ
ಪ್ರಕೃತಿಯ ಜೀವಿ-ನಿರ್ಜಿವಿಗಳ ಬದುಕಿಗೆ
ಆಸರೆ-ಆಧಾರವಾಗಿ
ನೋಡುಗರಿಗೆ
ರಮಣೀಯ ಸ್ಥಳವಾಗಿ
ಆಸಕ್ತರಿಗೆ ಚಾರಣತಾಣವಾಗಿ
ಸಂತಸ-ಸಡಗರ
ಮನಕೆ ಮುದ ನೀಡುವುದು….

ಸಾರ್ಥಕ ಬದುಕು ಹಾಗಿರಬೇಕು ನದಿಯಂತೆ
ಹುಟ್ಟು-ಸಾವುಗಳ ಮಧ್ಯೆ
ಬೇಕು-ಬೇಡಗಳ
ತಾನು ಬಯಸದೆ
ನೆರೆಯ ಜನರ ಸೇವೆಯಲಿ ಸವೆದು
ತನ್ನದೆಲ್ಲವನು
ಜಗಕೆ ಊಣಿಸಿ
ಮನ ತಾ ತೃಪ್ತನಾಗಬೇಕು
ಪರರ ಬಾಳಿಗೆ ಬೆಳಕಾಗಿ….


ಖಾಕಿಯೊಳಗಿನ ಕವಿ (ನಾಗಪ್ಪ.ಬಿ.ಪಿಎಸ್ಐ)

3 thoughts on “ಖಾಕಿಯೊಳಗಿನ ಕವಿ -ನಾಗಪ್ಪ.ಬಿ.ಪಿಎಸ್ಐ ಕವಿತೆ ಸಾರ್ಥಕ ಬದುಕು

Leave a Reply

Back To Top