ಕಾವ್ಯಯಾನ

ಸಮಾಜ

Blue Buddha Ceramic Head Figurine

ಕೆ.ಸುಜಾತಾ ಗುಪ್ತ

ಬಗ್ಗಿದವನ ಬೆನ್ನಿಗೊಂದು ಗುದ್ದು
ಇರಲು ಹಾಗೆ ಮತ್ತೊಂದು
ಗುದ್ದು
ಇದಾಗಿದೆ ಪ್ರಸ್ತುತ ಸಮಾಜದ ನೀತಿ
ಮೂರ್ಖತನದ ಪರಮಾವಧಿ
ದಾಟಿರಲು
ಶಾಂತಿಯ ತತ್ವವ- ಮಹತ್ವವ
ಅರಿವ ಮನಗಳುಹೆಣಗಳಾಗಿವೆ.

ಈಗೆಲ್ಲಿದೆ..ಶಾಂತಿ ಗೆ ತಾಣ!?
ಎಲ್ಲಿದೆ ಶಾಂತಿಗೆ ಪ್ರಾಮುಖ್ಯತೆ..
ಬುದ್ಧನನ್ನು ನೆನೆಯೆ ಪೆದ್ದನೆನುವರು..
‘ ಶಾಂತಿ ‘ ಅಸಹಾತೆಯಕತೆಯ
ಚಿಹ್ನೆ ಎನುವರು..
ಕಲ್ಪನೆಯಲ್ಲಿ ‘ಶಾಂತಿ ಮಂತ್ರ’
ಚಂದವೋ ಚಂದ..
ವಾಸ್ತವದಲ್ಲಿ ಎಲ್ಲವೂ
ಮಿಥ್ಯವೋ ಮಿಥ್ಯ…

********

Leave a Reply

Back To Top