ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿನಯಚಂದ್ರ ಎರಡು ಕವಿತೆಗಳು

ಒಗಟು

ಬಗೆದು ತೆಗೆದರಷ್ಟೆ ಅದು ನಿಧಿ
ಮೇಲ್ಮೈಯಲ್ಲೆ ಸಿಗುವುದು ಕಾಗೆ ಬಂಗಾರ
ಹೇಗೆ ತೆಗೆದರೂ ಪುಕ್ಕ ರೆಕ್ಕೆ ಕೊಕ್ಕು
ಕಾದು ಕುಳಿತರಷ್ಟೆ ಹಕ್ಕಿಯ ಕಣ್ಣು
ಹೆಣ್ಣು

ಛದ್ಮವೇಷದ ಠಕ್ಕರೇ ಊರ ತುಂಬ
ವೇಷ ತೊಡದವರು ದಕ್ಕುವುದು ದುರ್ಲಭ
ಸುರಳೀತರೂ ಹೊಂದಬೇಕು ತಮ್ಮದಲ್ಲದ ಮುಖವ
ಎಳೆಯೆಳೆಯಾಗಿ ಬಿಚ್ಚಿ ಬರುವವು ಪೊರೆ ತ್ಯಜಿಸಿದ

ಉರಗ

ಗಟ್ಟಿ ಸರಪಳಿಗೂ ಒಂದಿರುವುದು
ಪೊಳ್ಳು ಬೆಸುಗೆಯ ಕೊಂಡಿ, ಎಷ್ಟು ಶಕ್ತವೋ ಅಷ್ಟೆ
ಸರಪಳಿಯ ಶಕ್ತಿ, ಬಲ ಹೆಚ್ಚಿಸೆ
ಉದುರಿ ಬೀಳ್ವುದು ಹಿಡಿದುದೆಲ್ಲವ ಬಿಟ್ಟು
ತುಂಡುತುಂಡಾಗಿ

ಕನಸುಗಳೆಲ್ಲವ ಕಟ್ಟಿ ಬಿಗಿದ ಎಚ್ಚರದ ರಾತ್ರಿ
ಹೆಚ್ಚೇನು ಬೇಕಿಲ್ಲ, ಬಗೆಹರಿಸುವ ಯುಕ್ತಿ!

****

ಒಂಬೈನೂರೈವತ್ತು ಚದುರಡಿಯ
ಎರಡು ಕೋಣೆಯ ಖಾಲೀ ಮನೆಯಲ್ಲಿ
ಒಂದೇ ಒಂದು ದಪ್ಪನೆ ಹಲ್ಲಿ
ನಾಲ್ಕು ಸಣ್ಣನೆಯ ಜಿರಲೆ
ಇಲಿಯ ಒಂದೇ ಒಂದು ಹಿಕ್ಕೆ
ನಾಲ್ಕು ಉದ್ದ ಕಾಲಿನ ಜೇಡ ಸಾಕು
ನಿಮ್ಮ ಜೀವನ ನರಕ ಮಾಡಲು
ಅಥವಾ ಒಂದೇ ಒಂದು
ಹೆಣ್ಣ ನೆರಳು


-ವಿನಯಚಂದ್ರ

About The Author

Leave a Reply

You cannot copy content of this page

Scroll to Top