ಬಸವರಾಜ ಕಟ್ಟೀಮನಿ ಯುವ ಪುರಸ್ಕಾರಕ್ಕೆ ಕಥಾಸಂಕಲನಗಳ ಆಹ್ವಾನ:

ಇತರೆ

ಬಸವರಾಜ ಕಟ್ಟೀಮನಿ ಯುವ ಪುರಸ್ಕಾರಕ್ಕೆ

ಕಥಾಸಂಕಲನಗಳ ಆಹ್ವಾನ:

ಬೆಳಗಾವಿಯ ಬಸವರಾಜ ಕಟ್ಡೀಮನಿ ಪ್ರತಿಷ್ಠಾನವು ಯುವ ಪುರಸ್ಕಾರ ನೀಡಲು ೨೦೨೨ ರ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕಥಾ ಸಂಕಲನಗಳನ್ನು ಆಹ್ವಾನಿಸಿದೆ.

ಬಸವರಾಜ ಕಟ್ಟೀಮನಿ ಪ್ರಶಸ್ತಿಯು ೧೦,೦೦೦ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಈ ಪುಸ್ತಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಲೇಖಕರು ೪೦ ವರ್ಷದೊಳಗಿನವರಾಗಿರಬೇಕು.ವಯಸ್ಸಿನ ದೃಢೀಕರಣಕ್ಕಾಗಿ ಸೂಕ್ತ ದಾಖಲೆಯನ್ನು ಕಳುಹಿಸಬೇಕು. ಮಾರ್ಚ್ ೧೫,೨೦೨೩ ಕೃತಿಗಳನ್ನು ಕಳುಹಿಸಲು ಕೊನೆಯ ದಿನಾಂಕವಾಗಿರುತ್ತದೆ.ಸಂಕಲನದ ನಾಲ್ಕು ಪ್ರತಿಗಳನ್ನು ಕಳುಹಿಸಬೇಕೆಂದು ಡಾ.ಬಾಳಾಸಾಹೇಬ ಲೋಕಾಪುರ, ಸಂಚಾಲಕರು ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ ತಿಳಿಸಿದ್ದಾರೆ.

ಕೃತಿಗಳನ್ನು ಕಳುಹಿಸುವ ವಿಳಾಸ:
ಡಾ.ಬಾಳಾಸಾಹೇಬ ಲೋಕಾಪುರ
ಸಂಚಾಲಕರು,
ಬಸವರಾಜ ಕಟ್ಟೀಮನಿ ಪ್ರತಿಷ್ಠಾನ
‘ಚಾರುಕೀರ್ತಿ’
ಆದರ್ಶನಗರ,ಅಥಣಿ
ಬೆಳಗಾವಿ ಜಿಲ್ಲೆ-591304
ದೂ.+919343466313

Leave a Reply

Back To Top