ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ್

ನೀನೆ ಹೇಳಬೇಕಿದೆ

ಶಾಂತವಾಗಿದ್ದ ಮನದ ನದಿಗೆ
ಒಲುಮೆಯ ಕಲ್ಲೆಸೆದು ಅಲೆಗಳ
ನೆಬ್ಬಿಸಿದೆ

ಅಂಕೆಗಳ ಅಂಕುಶವಿಲ್ಲ
ಅಲೆಗಳಿಗೆ
ಈಗ ಅಲೆಗಳ ಶಾಂತವಾಗಿಸಲು
ನೀನೇ..ಕೇವಲ ನೀನೇ ಬೇಕು

ಖಾಲಿಯಾಗಿದ್ದ ಮನಸಿಗೆ ನೀನೆ
ಕನಸಿನರುಚಿ ಕಲಿಸಿದ್ದು
ಈಗ ನಿನಗಾಗಿ ಕೂಡಿಟ್ಟ ಕನಸು
ಮತ್ಯಾರಿಗೇ ಕೊಡಲಿ

ಚಂದಿರನಿಂದು ರಜೆಯ
ಮೇಲಿದ್ದಾನೆ
ಬರುವ ಮನಸಾದರೆ ಮಿಣುಕು
ಹುಳುವಿಗೆ ಕರೆಮಾಡು

ನಾನೂ ದೀಪಹಚ್ಚಿಲ್ಲ ನಂಗೂ
ಗೊತ್ತಿದೆ
ಪ್ರೀತಿಸಲು ಬೆಳಕುಬೇಕು ನಿಂಗೆ
ಸಹನೆ ಮೀರಿದ ಹಸಿವಾಗಿದೆ ನಂಗೆ

ಅಧರಗಳ ಆಲಿಂಗನ ವಾದಾಗ
ಮುಗುಳ್ನಗೆಗೂ ನಾಚಿಕೆ
ಆರುಮೆಯ ಮದ್ಯೆ ಅಸೂಯೆ
ಮರೀಚಿಕೆ

ಕರಗುವ ಭಯವಿರದು ಪ್ರೀತಿಗೆ
ಮತ್ತೇ ಮದ್ದು ಹುಚ್ಚೆದ್ದ ಕುದುರೆಗೆ ಬೇಗ ಬಾ

ಇಂದು ಅಮವಾಸ್ಯೆ
ಮರೆಯ ಬೇಡ
ಮಿಣುಕು ಹುಳುವಿಗೆ ಬರಲು ಹೇಳು
ಪ್ರಶ್ನೆಗಳು ಕಾದಿವೆ
ಉತ್ತರ ನೀನೇ ಹೇಳಬೇಕಿದೆ


About The Author

1 thought on “ಇಮಾಮ್ ಮದ್ಗಾರ್ ಕವಿತೆ-ನೀನೆ ಹೇಳಬೇಕಿದೆ”

Leave a Reply

You cannot copy content of this page

Scroll to Top