ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾಕು ತಾವಿನ ತಿರುವು

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ನಿರ್ವೀರ್ಯ ಬೆಟ್ಟದ ತುದಿ ನಿಂತು
ಬೀಸುವ ಬಿರುಗಾಳಿಗೆ
ಒಣ ಖಾರ ತೂರಬಾರದು
ಯಾರದೋ ಕಣ್ಢಿಗೆ ತಾಗಿ
ಜಿಹ್ವೆ ಝಲ್ಲೆನ್ನಬಾರದು

ನಿತ್ಯ ಸತ್ತು ಬದುಕುವವರಿಗೆ
ಆಸೆ ಆಮೀಷಗಳ ತೋರಬಾರದು
ಸುಖಾ ಸುಮ್ಮನೆ ನಂಬಿ,
ಕತ್ತಲ ತೆಕ್ಕೆಯಲಿ ಸಿಕ್ಕು
ಸಾವು ನೋವಿನಲಿ ಅವರು ಬಿಕ್ಕುವಂತಾಗಬಾರದು

ಮೌನ ರೋಧನದಲಿ
ದಿನವಿಡೀ ಹಸಿದು
ಅನ್ನಕ್ಕಲೆವ ಕೀತಗಾಯದ
ನಾಯಿಗೆ ಕಲ್ಲೆಸೆಯಬಾರದು
ಪ್ರತಿ ಪ್ರಾಣಿಯ ಶಬ್ದ,ಉಸಿರು
ನೆಲದ ಹೆಜ್ಜೆ ಗುರುತಾಗಿದೆಂಬುದು
ಮರೆಯಬಾರದು

ಅಲ್ಲಲ್ಲಿ ಚಲ್ಲಾಪಿಲ್ಲಿ ಬಿದ್ದ
ಕಾಳುಕಡಿಗಳ ತುಳಿಯಬಾರದು
ನೆತ್ತರು ನೆಂದ ಮಣ್ಣಲ್ಲಿ
ಬೆಳೆದು,
ತಣ್ಣಗೆ ಸಾವು ಬೇಯಿಸಿ
ಕಾಲದೆಣಿಕೆಯಲಿ ನಿಶ್ಯಬ್ದವಾದ ರೈತನ ಮರೆಯಬಾರದು

ಮರ್ಮರ ಬರ್ಬರ ಮನ
ಸುಟ್ಟುಕೊಂಡು, ಮೂಕ ವೇದನೆ ಅನುಭವಿಸುವವರಿಗೆ ಗದರಿಸಬಾರದು
ನಾಳೆಯ ದಿನ…….
ಬಳಲಿಕೆಯ ಆಳವು ಕರಾಳವಾಗಿ ಎಮಗೆ ಮುಳಗಿಸಬಾರದು
ನಾವು-ನಾವೇ……
ನಾಕು ತಾವಿನ ತಿರುವಿನಲಿ
ಹಾದಿಯಿಂದ ಹಾದಿಗೆ
ಮಾನವೀಯತೆಯ ಬದಲಿಸಬಾರದು.


About The Author

4 thoughts on “ಶರಣಪ್ಪ ತಳ್ಳಿ ಕುಪ್ಪಿಗುಡ್ಡ- ನಾಕು ತಾವಿನ ತಿರುವು”

  1. Raghavendra Mangalore

    ತಳ್ಳಿ ಅವರ ಕವಿತೆಯನ್ನು ಓದುವುದೇ ಒಂದು ಸೌಭಾಗ್ಯ….ತುಂಬ ಅರ್ಥಗರ್ಭಿತ ಕವನ

  2. ಅರಳಿ ನಾಗಭೂಷಣ ಗಂಗಾವತಿ

    ಸಮುಷ್ಟಿ ಭಾವದಲ್ಲಿ ಒಳ್ಳೆಯ ಆಶಯ ಕಾವ್ಯ ಕಟ್ಡಿ ಕೊಟ್ಟಿದ್ದಾರೆ.
    ಶರಣು

Leave a Reply

You cannot copy content of this page

Scroll to Top