ಆಶಾ ಯಮಕನಮರಡಿಯವರ ಕವಿತೆ-ಹಣತೆ

ಕಾವ್ಯ ಸಂಗಾತಿ

ಹಣತೆ

ಆಶಾ ಯಮಕನಮರಡಿ

ಹಚ್ಚೋಣ ದೀಪವನ್ನು
ಮುಖಭಾವ ಕಾಣಲು
ಮಂದ ಬೆಳಕಿನಲ್ಲಿ
ಸುಂದರ ಮನ ಕಾಣಲಿ

ಹೊತ್ತಿಸಿರುವ ಜ್ಯೋತಿಗೆ
ಮಕ್ಕು ಬಾರದಂತೆ ಕಾಯ್ದು
ಮತ್ತೆ ಮತ್ತೆ ಶಾಂತಿ ತೈಲವೆರೆದು
ಕಾಂತಿಗುಂದದಂತೆ ಕಾಯೋಣ

ಹಗಲಿರುಳೆನ್ನದೆ ಬೆಳಗಲಿ
ದೀಪವದು ಪ್ರಭೆ ಬೀರಲಿ
ಕಷ್ಟಗಳ ಕತ್ತಲೆ ಸುಳಿಯದಂತೆ
ಜ್ವಲಿಸದೆ ಅದು ಪ್ರಜ್ವಲಿಸಲಿ

ಯಾರೋ ಹಚ್ಚಿದ ಆ ಹಣತೆ
ಮತ್ತೆ ಮತ್ತೆ ಬೆಳಗಿಸುತಿದೆ
ಕಿಚ್ಚಾಗಿ ದಹಿಸದೆ ಎಲ್ಲವನು
ಕಿರು ಜ್ಯೋತಿಯಾಗಿ ಕಳೆಯುತಿದೆ ತಮವನು


Leave a Reply

Back To Top