ಕರಗಿದ ಕುಂಕುಮ-ಹಮೀದಾ ಬೇಗಂ ದೇಸಾಯಿ ರವರ ಕವಿತೆ

ಕಾವ್ಯಸಂಗಾತಿ

ಕರಗಿದ ಕುಂಕುಮ

ಹಮೀದಾ ಬೇಗಂ ದೇಸಾಯಿ

ಬೇಡೆನಗೆ ಈ
ದೇವಿಯ ಪಟ್ಟ..
ಬಾಳಲು ಬಿಡಿ
ಹೆಣ್ಣಾಗಿ ನನ್ನ..

ನನ್ನ ಕನಸುಗಳಿಗೆ
ಕಲೆಸಬೇಡಿ ಹೊಲಸು ಕೆಸರು
ಮಾಡಿ ನನ್ನ ದೇವದಾಸಿ
ಕಾಮುಕರ ಕೈಗಿಡಬೇಡಿ..

ವಿಕೃತ ಸಮಾಜದ
ಅನಿಷ್ಟ ಪರಂಪರೆಯ
ಕೈಗೊಂಬೆ ಮಾಡಬೇಡಿ
ಮರ್ಯಾದೆಯ ಬದುಕು ಕೊಡಿ

ಪೌರುಷದ ಆ ನೋಟ
ಕಾಮ ಪಿಶಾಚಿಯ ಬೇಟ
ದೇವಿ ಹೆಸರಿನ ಕುಂಕುಮ
ಕರಗಿ ನಲುಗಿ ನರಳುತಿದೆ…


Leave a Reply

Back To Top