ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭಂಡಾರಿ.

ಚುಚ್ಚಿದ ಮುಳ್ಳಿನ ನೋವನು ಪಕಳೆಯ ಸುಗಂಧ ಮರೆಸಿತಲ್ಲ ಗೆಳೆಯಾ
ಬೆಚ್ಚಿದ ಕಳ್ಳ ಮನವು ನೋಡದೆ ತರಳೆ ದೃಷ್ಟಿಯ ತೆರೆಸಿತಲ್ಲ ಗೆಳೆಯಾ.

ದಾರಿಯು ಸಾಗದೆ ಮರೆತು ಅದೆಲ್ಲಿಂದಲೋ ಬಂದೆಯೇನು.
ದೂರದ ಪಯಣ ನಿಲ್ಲದೆ ನಿನ್ನಡಿಗೆ ಬಂದು ಜರೆಸಿತಲ್ಲ ಗೆಳೆಯಾ.

ಅನುದಿನವೂ ಕಾಯುವ ತವಕ ಹುಚ್ಚು ಹೊಳೆಯಾಗಿದೆ ಕಣೋ.
ಸುದಿನವು  ಬರುವ ನೀರೀಕ್ಷೆಗೆ ತೋರಣದ ಕೆಚ್ಚು ಕರೆಸಿತಲ್ಲ ಗೆಳೆಯಾ.

ಅಂದದಿ ಹಚ್ಚ ಹಸಿರಿನ ವನಸಿರಿಯ ಗಾಳಿ ಬೀಸಿದಾಗ ತಬ್ಬಿದೆ ಏಕೋ.
ಚಂದದಿ ಚಂದ್ರಿಕೆಯ ಮನಸಾರೆ ಬರಸೆಳೆದು ಬಿಗಿಯಾಗಿ ಬೆರೆಸಿತಲ್ಲ ಗೆಳೆಯಾ.

ಅನುರಾಗದ ಅನುಬಂಧದಿ ಜೋಡಿ ಹಕ್ಕಿಗಳು ನಾವು ನೂರು ಜನ್ಮಕೂ
ಅನುಕ್ಷಣವೂ ಒಲವ ಸಾನುರಾಗ ಜಯಳನು ಹಕ್ಕಿನಲಿ  ಅರೆಸಿತಲ್ಲ ಗೆಳೆಯಾ.


About The Author

1 thought on “ಜಯಶ್ರೀ ಭಂಡಾರಿ.-ಗಜಲ್”

Leave a Reply

You cannot copy content of this page

Scroll to Top