ಬಾಗೇಪಲ್ಲಿಯವರ ಹೊಸ ಕವಿತೆ

ಕಾವ್ಯಸಂಗಾತಿ

ಗಜಲ್

ಬಾಗೇಪಲ್ಲಿ

ಬಾ ನನ್ನ ಯೋಚನೆಯಲಿ ಪುನಃ ಪ್ರೀತಿಯಾ ಮಾತನಾಡೋಣ ನಲ್ಲೆ
ನೆನ್ನೆಯದಿನ ಮುಗಿಯಿತಲ್ಲಾ ಅಲ್ಲಿಂದ ಮತ್ತೆ ಆರಂಭಿಸೋಣ ನಲ್ಲೆ

ನೆನ್ನೆಯಾಡಿದ ಮಾತು ತೃಪ್ತಿ ತಂದು ಗಾಢನಿದ್ದೆಗೆ ಜಾರಿತೆನ್ನ ಮನ ನಲ್ಲೆ
ಇಂದು ನೀನೂ ತೃಪ್ತಳಾಗಿ ಇಬ್ಬರೂ ನಿದ್ರೆಗೆ ಜಾರಿಬಿಡೋಣ ನಲ್ಲೆ

ಕಾಶ್! ಜೋಡಿ ಮನಗಳು ಅರೆನೆದ್ದೆಯಲೆ ತೇಲಾಡಬಹದು ನಲ್ಲೆ
ಇರುಳ ನಭದ ಮಿನುಗುಟ್ಟು ತಾರೆಯ ಕೂಡ ಸಂಭಾಷಿಸೋಣ ನಲ್ಲೆ

ದೃವದ ತುದಿಗೂ ಹೋಗಿ ಸಪ್ತ ಋಷಿಗಳಿಗೆ ನಮಿಸೋಣ ನಲ್ಲೆ
ಮದುವೆಯ ದಿನ ತೋರುವ ಅರುಂಧತಿ ವಶಿಷ್ಠರ ಕಾಣೋಣ ನಲ್ಲೆ

ಕೃಷ್ಣಾ ! ಎಚ್ಚರಗೂಂಡರು ಚಿಂತಿಸದಿರು ಆಗ ಯೋಚಿಸೋಣ ನಲ್ಲೆ
ಮುಟ್ಟಲಾಗದ ಚಂದಿರನದೇ ಆದ ತಂಬೆಳಕ ಸ್ಪರ್ಶಿಸೋಣ ನಲ್ಲೆ.


Leave a Reply

Back To Top