ಉಷಾಜ್ಯೋತಿ ಮಾನ್ವಿರವರ ಹೊಸ ಗಜಲ್

ಕಾವ್ಯಸಂಗಾತಿ

ಗಜಲ್

ಉಷಾಜ್ಯೋತಿ ಮಾನ್ವಿ

ನೋಟ ಬೆರೆಯಲು ಎದೆಗೆ ಹತ್ತಿರ ಬಂದೆಯಲ್ಲ ನೀನು
ಮಾಟ ಮಾಡಿ ಒಲವ ಗುಡಿಯಲ್ಲಿ ನಿಂದೆಯಲ್ಲ ನೀನು

ಪ್ರಣಯ ಪೂಜೆಗೆ ಮೌನವ ಮಂತ್ರವಾಗಿಸುತ ಉಲಿದೆ
ಮೂಕ ಪ್ರೀತಿಗೆ ಮಾತು ಕಲಿಸುತ ನಲಿದೆಯಲ್ಲ ನೀನು

ಮಂದಹಾಸದಿ ಮೊಗವರಳಿಸಿ ತುಂಟನಗೆಯ ಬೀರಿದೆ
ಶೋಕ ನೀಗಿಸಿ ಮನಕೆ ಸಾಂತ್ವನ ನೀಡಿದೆಯಲ್ಲ ನೀನು

ಮುದದಿ ನುಡಿಯಲು ಬಿರಿದಿವೆ ಮಮತೆಯ ಮಲ್ಲಿಗೆ
ಎದೆಗೂಡಲಿ ಅನುರಾಗದೀಪ ಬೆಳಗಿದೆಯಲ್ಲ ನೀನು

ಉಷೆಯ ಬಾಳಲಿ ಭಾವ ಬೆಸುಗೆಯಾಗಿ ಬಂದೆ ಇಂದು
ಅಭಯ ನೀಡುತ ಪ್ರೀತಿ ತೋರುತ ನಡೆದೆಯ

———————————-

Leave a Reply

Back To Top