ಗಝಲ್

ಕಾವ್ಯ ಸಂಗಾತಿ

ಗಝಲ್

ಶಂಕರಾನಂದ ಹೆಬ್ಬಾಳ

ಕನಲಿದ ಹೃದಯಕ್ಕೆ ಪ್ರೀತಿಯ ಮುಲಾಮು
ಹಚ್ಚು ಬಾ
ಕನವರಿಸಿದ ಕನಸುಗಳ ಮೂಟೆಯ ಬಾಯಿ
ಬಿಚ್ಚು ಬಾ

ಕಿನಿಸು ತೊರೆದು ಪ್ರೇಮದಲಿ ನುಡಿಯಬಾರದೆ
ಈಗ
ಕರುಣೆ ತೋರುವ ಸಮಾಧಾನದ ನುಡಿಗಳನು
ಮೆಚ್ಚು ಬಾ

ಕುರುಹು ಉಳಿದು ಹೋಯಿತೆ ತಾಜಮಹಲಾಗಿ
ಇಂದು
ಕಮರಿದ ಒಡಲ ಸವಿಭಾವಗಳನು ತೋಷದಲಿ
ಮುಚ್ಚು ಬಾ

ಕಣ್ಣಾಲೆಯಲಿ ಕುಣಿದು ಹೋಗದಿರು ಮುದ್ದಿನ
ರತ್ನ
ಕಮಲದ ಎಸಳಂತೆ ಮಧುರ ಅಧರವನು
ಕಚ್ಚು ಬಾ

ಕೋಗಿಲೆ ಕಂಠದಲಿ ಸುಶ್ರಾವ್ಯ ಗೀತೆಯನು
ಹಾಡುವೆಯಲ್ಲ
ಕವಿವರ್ಯ ಅಭಿನವನ ಸಂಗವನು ಅವಿರತ
ನೆಚ್ಚು ಬಾ


Leave a Reply

Back To Top