ಕತ್ತಲ ದೀಪ !!ಕಾಡಜ್ಜಿ ಮಂಜುನಾಥ ಕವಿತೆ

ಕಾವ್ಯ ಸಂಗಾತಿ

ಕತ್ತಲ ದೀಪ !!

ಕಾಡಜ್ಜಿ ಮಂಜುನಾಥ ಕವಿತೆ

.

ಸಕಲರಿಗೆಲ್ಲಾ
ಬೆಳಕು ನೀಡುವ ದೀಪವೇ
ಇಂದು ಕತ್ತಲಲ್ಲಿ ಕುಳಿತಿದೆ;
ತನಗೆ ಆವರಿಸಿದ ತಾಮಸವ
ಓಡಿಸಲು ತಲೆಬಾಗಿ
ಬೇಡುತಿದೆ !
ಬೆಳಕು ಬಯಸಿ ಬಂದ ಜನರ
ಎದೆಗಳು ಕೆಂಡವಾಗಿ ಕುದಿಯುತಿವೆ !
ದೀಪದ ಬೆಳಕಿನ ಶಕ್ತಿಯೇ
ಇಂದು ರಕ್ಷಣೆಯ ಕೋರುತಿದೆ !!
ನಂಬಿಕೆಯ‌ ಎಣ್ಣೆಯು
ದಹನವಾಗಿ; ಅಪನಂಬಿಕೆಯ
ಬತ್ತಿಯು ಮೊಳೆತು ದುರ್ಗಂಧ
ಬೀರುತಿದೆ !
ದೀಪವು ಬುಡದ ಕತ್ತಲು
ಮರೆತು ;ತಾನೇ ಬೆಳಕೆಂದು
ನಯವಂಚಿಸಿ ;ತನ್ನೆದೆಯು
ಕತ್ತಲೆ ಕೋಣೆಯಲ್ಲಿ
ಬೆಳಕಿಗೆ ಮೊರೆಯಿಡುವ
ಕಾಲವ ತಂದುಕೊಂಡಿದೆ !
ಕತ್ತಲಲಿ ಬೆಂದವರ ಎದೆಯ
ಬಿಸಿಯುಸಿರಿನ ಜ್ವಾಲಾಮುಖಿಗೆ
ಬೆಳಕೇ ಇಂದು ಆಸರೆ ಬಯಸಿ
ದೈವವ ಬೇಡುತಿದೆ !!


5 thoughts on “ಕತ್ತಲ ದೀಪ !!ಕಾಡಜ್ಜಿ ಮಂಜುನಾಥ ಕವಿತೆ

Leave a Reply

Back To Top