ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಕಾವ್ಯ ಸಂಗಾತಿ

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಈರಪ್ಪ ಬಿಜಲಿ ಕೊಪ್ಪಳ

ಸ್ವತಂತ್ರ ಭಾರತಕೆ ದುಡಿದವರ ಸ್ಮರಿಸಿ ಬಾವುಟ ಹಾರಿಸಬೇಕಿದೆ ನಾವು
ಪವಿತ್ರ ಭೂಮಿಗೆ ಮಡಿದವರ ನುತಿಸಿ ಹಿರಿಮೆ ಮೆರೆಸಬೇಕಿದೆ ನಾವು ||

ವಿಶ್ವವೇ ಮೆಚ್ಚಿ ಆರಾಧಿಸುವ ಸಂಸ್ಕ್ರತಿ ತಾಯಿ ಬೇರು ನಮದಲ್ಲವೇ
ವಿವೇಕಾನಂದರ ನೈಪುಣ್ಯತೆ ಮಕ್ಕಳ ಎದೆಯಲಿ ಕೂರಿಸಬೇಕಿದೆ ನಾವು ||

ಬಿಚ್ಚುಗತ್ತಿ ವೀರ ಶೂರ ಮಹಿಳೆಯರ ಸಾಧನೆ ಪೊಗಳುವ ಸುದಿನ
ವಂಚಿಸುವ ಆಂಗ್ಲರ ಗುಣಗಳ ಮನದಿಂ ದೂರ ಸರಿಸಬೇಕಿದೆ ನಾವು ||

ವಿಶ್ವೇಶ್ವರಯ್ಯ ಅಭಿಯಂತರರ ದಿವ್ಯ ದೃಷ್ಠಿ ನವ ಪೀಳಿಗೆಗೆ ಸ್ಪೂರ್ತಿ
ವಿವಿಧತೆಯ ತೊರೆದು ಐಕ್ಯತೆ ಮೆರೆದು ಜಗಕೆ ತೋರಿಸಬೇಕಿದೆ ನಾವು ||

ನೇತಾಜಿ ಗಾಂಧೀಜಿ ತಿಲಕರು ಹಚ್ಚಿದ ಸ್ವರಾಜ್ಯದ ಪಣತಿಲಿ ಬಿಜಲಿ ಮಿನುಗಿದೆ
ದಾಸ್ಯಕೋಟೆ ಭೇದಿಸಿದ ಹುತಾತ್ಮರ ಜಪಿಸಿ ಋಣ ತೀರಿಸಬೇಕಿದೆ ನಾವು ||


ಈರಪ್ಪ ಬಿಜಲಿ ಕೊಪ್ಪಳ

Leave a Reply

Back To Top