ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣಾ ನರೇಂದ್ರ
ಸಖಿ ಗೀತೆ
ಅರುಣಾ ನರೇಂದ್ರ
ನಾ ನೆಟ್ಟ ಸಸಿಗೆ
ನೀನೇಕೆ ನೀರೆರೆದೆ
ಅದು ಬಿಟ್ಟ ಹೂವ
ಪರಿಮಳದಲ್ಲಿ
ನಿನ್ನದೇ ನೆನಪಿದೆ
ನೀ ತಂದ ಮಲ್ಲಿಗೆ
ಆಸೆಯಿಂದ ಮುಡಿದೆ
ಊರ ತುಂಬಾ
ನಿನ್ನ ಹೆಸರ ಹೇಳಿ
ಸುದ್ದಿ ಮಾಡಿದೆ ಸಖಾ..
ನೀ ಬರುವಿಯೆಂದು
ಕಾಯುತ್ತಾ
ನಾ ಮುಡಿದ
ಮಲ್ಲಿಗೆ ಮುಖ
ಬಾಡಿ ಹೋಯಿತು..
ಮಲ್ಲಿಗೆಯ ಮುಖದಲಿ
ಇಂದೇಕೋ ಸೊಗಸಿಲ್ಲ ಸಖಾ
ನಿನ್ನ ಕೈಯ ಮೃದು ಸ್ಪರ್ಶವಿರದೆ
ಮುದುಡಿ ಹೋಗಿದೆ
ಸುಖವಿಲ್ಲ ಸುಖಾ
ಅರುಣಾ ನರೇಂದ್ರ