ಗಝಲ್

ಕಾವ್ಯ ಸಂಗಾತಿ

ಗಝಲ್

ಶಂಕರಾನಂದ ಹೆಬ್ಬಾಳ

ಒಳಗೊಳಗೆ ಕುದಿಯುತ್ತಿದ್ದೇನೆ ಆಕ್ರೋಶಕ್ಕೆ
ಪ್ರತಿಕಾರ ತೀರಿಸಬೇಕೆಂದು
ಬಿರುಗಾಳಿಯಾಗಿ ಬೀಸುತ್ತಿದ್ದೇನೆ ಹೃದಯ
ಹಿಂಡುವರ ಮುತ್ತಬೇಕೆಂದು

ಹಠತೊಟ್ಟು ಕುಳಿತಿದ್ದೇನೆ ತಿಗಣೆಯ
ತೆರದಲಿ ಒರೆದುಬಿಡಬೇಕೆಂದು
ಹನಿಯಾಗಿ ಬೀಳುತ್ತಿದ್ದೇನೆ ಬೆಂಕಿಯ
ಕಿಡಿಗಳನ್ನು ಸುರಿಸಬೇಕೆಂದು

ಅಗ್ನಿಯಾಗಿ ಉರಿಯುತ್ತಿದ್ದೇನೆ ಕಾಮಾಂಧರನು
ತನ್ನೊಡಲಿಗೆ ಹಾಕಬೇಕೆಂದು
ಚೂರಿಯಿಂದ ಇರಿಯುತಿದ್ದೇನೆ ಮನವನು
ಘಾಸಿಗೊಳಿಸಿದವರ ಕೊಲ್ಲಬೇಕೆಂದು

ನಿಸೂರವಿಲ್ಲದೆ ಒದ್ದಾಡುತ್ತಿದ್ದೇನೆ ನಿದ್ದೆ
ಕೆಡಿಸಿದವರ ಕಥೆ ಮುಗಿಸಬೇಕೆಂದು
ಹಗಲಿರುಳು ಕಾಯುತ್ತಿದ್ದೇನೆ ಕಾದ
ಹೆಂಚಿನಂತೆ ಸುಡಬೇಕೆಂದು

ಅಭಿನವನಲ್ಲಿ ಮೊರೆಯಿಡುತ್ತಿದ್ದೇನೆ ನ್ಯಾಯಕೆ
ಜಯವು ಸಿಗಲೆಬೇಕೆಂದು
ನೊಂದವರ ದನಿಯಾಗಿದ್ದೇನೆ ಇನ್ನಾದರೂ
ಈ ಕ್ರೌರ್ಯ ನಿಲ್ಲಬೇಕೆಂದು


ಶಂಕರಾನಂದ ಹೆಬ್ಬಾಳ

Leave a Reply

Back To Top