ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಝಲ್

ಶಂಕರಾನಂದ ಹೆಬ್ಬಾಳ

ಒಳಗೊಳಗೆ ಕುದಿಯುತ್ತಿದ್ದೇನೆ ಆಕ್ರೋಶಕ್ಕೆ
ಪ್ರತಿಕಾರ ತೀರಿಸಬೇಕೆಂದು
ಬಿರುಗಾಳಿಯಾಗಿ ಬೀಸುತ್ತಿದ್ದೇನೆ ಹೃದಯ
ಹಿಂಡುವರ ಮುತ್ತಬೇಕೆಂದು

ಹಠತೊಟ್ಟು ಕುಳಿತಿದ್ದೇನೆ ತಿಗಣೆಯ
ತೆರದಲಿ ಒರೆದುಬಿಡಬೇಕೆಂದು
ಹನಿಯಾಗಿ ಬೀಳುತ್ತಿದ್ದೇನೆ ಬೆಂಕಿಯ
ಕಿಡಿಗಳನ್ನು ಸುರಿಸಬೇಕೆಂದು

ಅಗ್ನಿಯಾಗಿ ಉರಿಯುತ್ತಿದ್ದೇನೆ ಕಾಮಾಂಧರನು
ತನ್ನೊಡಲಿಗೆ ಹಾಕಬೇಕೆಂದು
ಚೂರಿಯಿಂದ ಇರಿಯುತಿದ್ದೇನೆ ಮನವನು
ಘಾಸಿಗೊಳಿಸಿದವರ ಕೊಲ್ಲಬೇಕೆಂದು

ನಿಸೂರವಿಲ್ಲದೆ ಒದ್ದಾಡುತ್ತಿದ್ದೇನೆ ನಿದ್ದೆ
ಕೆಡಿಸಿದವರ ಕಥೆ ಮುಗಿಸಬೇಕೆಂದು
ಹಗಲಿರುಳು ಕಾಯುತ್ತಿದ್ದೇನೆ ಕಾದ
ಹೆಂಚಿನಂತೆ ಸುಡಬೇಕೆಂದು

ಅಭಿನವನಲ್ಲಿ ಮೊರೆಯಿಡುತ್ತಿದ್ದೇನೆ ನ್ಯಾಯಕೆ
ಜಯವು ಸಿಗಲೆಬೇಕೆಂದು
ನೊಂದವರ ದನಿಯಾಗಿದ್ದೇನೆ ಇನ್ನಾದರೂ
ಈ ಕ್ರೌರ್ಯ ನಿಲ್ಲಬೇಕೆಂದು


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top