ಕಾವ್ಯ ಸಂಗಾತಿ
ಮನದಿಂಗಿತ
ಅರುಣಾ ರಾವ್
ಹಿಮ ಹೊದ್ದು ಮಲಗಿದೆ
ಅಚಲ ಬಾನಂಚಲಿ
ಮಂಜ ತೆರೆಯನೆಳೆದಿದೆ
ಭುವಿಯು ಪರದೆಯಂದದಿ
ಥರಥರನೆ ನಡುಗುತಿವೆ
ಜಗದ ಜೀವರಾಶಿಯ ಎಲ್ಲವು
ಸೂರ್ಯ ದೇವನಪ್ಪುಗೆಗೆ
ಬಯಸಿ ಕಾವ ಜನಸ್ತೋಮವು
ಮಂಜ ಮಾಲೆ ಕಿತ್ತಸೆದು
ಶಾಖ ನೀಡು ಸುಮ್ಮನೆ
ಚಳಿಯು ರೋಗ ಬಿಸಿಲೆ ಯೋಗ
ಬಾರೋ ಭಾಸ್ಕರ ಬಿರ್ರನೆ
=========================================